Tribute to martyred soldiers: ಸಿಕ್ಕಿಂಗ್ ರಾಜ್ಯದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಅರ್ಪಣೆ
ಚಿಕ್ಕಮಗಳೂರು: ಇತ್ತೀಚೆಗೆ ಸಿಕ್ಕಿಂಗ್ ರಾಜ್ಯದ ವಾಹನ ಅಪಘಾತದಲ್ಲಿ ಹುತಾತ್ಮ ರಾಗಿರುವ ಭಾರತೀಯ ಸೇನೆಯ ವೀರ ಯೋಧರಿಗೆ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಸೋಮವಾರ ಸಂಜೆ ಕ್ಯಾಂಡಲ್ ಹಿಡಿದು ಶ್ರದ್ದಾಂಜಲಿ ಸಲ್ಲಿಸ ಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಸೈನಿಕರು ಆಪರೇಷನ್ ಸಲು ವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ನಾಲ್ಕು ವಾಹನಗಳಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅತಿಯಾದ ಹಿಮಾದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಒಂದು ವಾಹನವು ಕಂದಕಕ್ಕೆ ಉರುಳಿದೆ ಎಂದರು.
ವಾಹನದಲ್ಲಿ ಸುಮಾರು ೨೦ ಸೈನಿಕರು ಪ್ರಯಾಣಿಸುತ್ತಿದ್ದು ನೂರಾರು ಅಡಿಗಳ ಎತ್ತರದಿಂದ ಕಂದಕಕ್ಕೆ ಉರುಳಿದ ಸಂದರ್ಭದಲ್ಲಿ ಸುಮಾರು ೧೬ ಮಂದಿ ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ ೪ ಮಂದಿಯು ಅತಿಯಾದ ಗಾಯಗಳಿಂದ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾಜಿ ಸೈನಿಕರ ಸಂಘದ ವತಿಯಿಂದ ತಾಲ್ಲೂಕು ಪಂಚಾಯಿತಿಯ ಸಂಘದ ಕಚೇರಿಯಿಂದ ಮೆರವಣಿಗೆ ನಡೆಸಿ ಮೃತರಾದ ವೀರ ಯೋಧರಿಗೆ ಜಯಘೋಷ ಕೂಗಿ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕೃಷ್ಣೇಗೌಡ, ರಾಮಯ್ಯ, ಬಸವರಾಜ್ ಪ್ರಾಸಿಸ್ ಡಿಸೋಜಾ, ನಾಗರಾಜ್, ಹೆಚ್.ಎಂ.ಮಂಜುನಾಥ್, ಎನ್.ಸಿ.ಶಂಕರ್, ಜಬ್ಬಾರ್ಖಾನ್, ವೇಣು, ಗಿಡ್ಡೇಗೌಡ, ಡಿಸಿಲ್ವಾ, ರಾಮಚಂದ್ರಶೆಟ್ಟಿ, ಕುಮಾರಸ್ವಾಮಿ, ಮಹಾಬಲರಾಮ್ ರೈ, ಸಂಘದ ಪದಾಧಿಕಾರಿಗಳು, ಸಮಾನ ಮನಸ್ಕರ ಬಳಗದ ಕೋಟೆ ಸೋಮಣ್ಣ, ಕೇಶವೇಗೌಡ, ಶ್ರೀನಿವಾಸ್, ಶ್ರೀಧರ್ ದೊಣಿಖಣ, ಅಶ್ವಥ್ ನಾರಾಯಣ್, ರಘು, ಬಸವರಾಜ್ ಹಾಜರಿದ್ದರು.
Tribute to martyred soldiers