September 19, 2024

Booth victory campaign launched: ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

0

ಚಿಕ್ಕಮಗಳೂರು-ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಸಂಘಟನೆ ದೃಷ್ಠಿಯಿಂದ ತುಂಬಾ ಉಪಯುಕ್ತವಾದದ್ದು ಎಂದು ಶ್ಯಾಮ್‌ಪ್ರಕಾಶ್ ಮುಖರ್ಜಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರೇವನಾಥ್ ತಿಳಿಸಿದರು.

ಹಿರೇಮಗಳೂರಿನ ಸಮುದಾಯ ಭವನದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಬಿಜೆಪಿ ಪಕ್ಷವು ಚುನಾವಣೆಗೆ ಮಾತ್ರ ಸೀಮಿತವಾಗದೆ, ದೇಶ ಕಟ್ಟುವ ಕೆಲಸಕದಕೆ ಮುಂದಾಗಿದೆ, ಮುಂಬರುವ ಚುನಾವಣೆಗೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಕ್ರೀಯಗೊಳಿಸಲಾಗುತ್ತಿದೆ, ಬೂತ್ ಗೆದ್ದರೆ ಬಿಜೆಪಿ ಪಕ್ಷ ಗೆದ್ದಂತೆ ಎಂದರು.

ಬಿಜೆಪಿ ಹಲವಾರು ವರ್ಷಗಳಿಂದ ಪೇಜ್ ಪ್ರಮುಖ್ ಸೇರಿ ನಾನಾ ರೀತಿಯ ಸಂಘಟನಾ ಪೂರ್ವಕವಾದ ವಸ್ತುಗಳನ್ನು ಬಳಸಿಕೊಂಡು ವಿಶ್ವಾಸದಿಂದ ಕೆಲಸ ಮಾಡುತ್ತಿದೆ. ಚುನಾವಣೆ ಕೆಲವೇ ತಿಂಗಳು ಇರುವಾಗ ಆರಂಭವಾಗಿರುವ ಈ ಅಭಿಯಾನಕ್ಕೆ ಕೈಜೋಡಿಸಿ ನಗರದ ೧೦೯ ಬೂತ್‌ಗಳಲ್ಲೂ ಪಕ್ಷದ ಸೂಚನೆ ಪ್ರಕಾರ ೧೦ ದಿನಗಳ ಕಾಲಕ್ಕಿಂತಲೂ ಮೊದಲೇ ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ವಾರ್ಡ್ ನಂ. ೩೩ರಲ್ಲಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿ ಬೂತ್‌ಗಳನ್ನು ಸಸಕ್ತವನ್ನಾಗಿ ಮಾಡುವ ಉದ್ದೇಶದಿಂದ ಬಿಜೆಪಿ ಪಕ್ಷವು ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಬೂತ್‌ನ ಅಧ್ಯಕ್ಷರು, ಬೂತ್ ಕಮಿಟಿ ಸಂಚಾಲಕರು ಒಟ್ಟಿಗೆ ಸೇರಿ ಬಿಜೆಪಿ ಸರ್ಕಾರದ ಕೆಲಸದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ, ಬೂತ್ ಗೆದ್ದರೆ ದೇಶ ಗೆಲ್ಲುವ ಭರವಸೆಯಿಂದ ಮುಂದಿನ ವಿಧಾನ ಸಭಾ ಕ್ಷೇತ್ರದಿಂದ ೧೫೦ಕ್ಕು ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಿಡಿಎ ಸದಸ್ಯ ರಾಜ್‌ಕುಮಾರ್, ಸ್ಥಳಿಯರಾದ ಕೇಶವಮೂರ್ತಿ, ಬೂತ್ ಅಧ್ಯಕ್ಷ ನಂದನ್‌ಕುಮಾರ್, ಸಂಜಯ್, ಕಾಂತರಾಜು, ಅರುಣ್‌ಕುಮಾರ್ ಉಪಸ್ಥಿತರಿದ್ದರು.

Booth victory campaign launched

Community-verified icon

About Author

Leave a Reply

Your email address will not be published. Required fields are marked *

You may have missed