September 19, 2024

Special Puja at Kannada Sena Ganapati Temple: ಕನ್ನಡ ಸೇನೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0
ಕನ್ನಡ ಸೇನೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕನ್ನಡ ಸೇನೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್.ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಸೇನೆ ಜಿಲ್ಲಾ ಸಮಿತಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ನಗರದ ಗಣಪತಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ವಿತರಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ ಮಾತನಾಡಿ, ಕಾರ್ಯಕರ್ತರು, ಕನ್ನಡ ನಾಡಿನ ಜನರ ಏಳಿಗೆಗೆ ದುಡಿಯುತ್ತಿರುವ ಕೆ.ಆರ್. ಕುಮಾರಣ್ಣ ಅವರಿಗೆ ಇನಷ್ಟು ಶಕ್ತಿ, ಸಾಮರ್ಥ ದೊರೆಯಲಿ. ಕನ್ನಡ ಕಂಪು ಹರಿಸಲು ಅವರಿಗೆ ಆರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಮಲೆನಾಡು ಭಾಗದಲ್ಲಿ ಮಳೆ ಕ್ಷೀಣಿಸಿದ್ದು, ರೈತರು ಕಂಗಲಾಗಿದ್ದಾರೆ. ನಾಡಿನಲ್ಲಿ ಮಳೆ, ಬೆಳೆ ಬರಲಿ ಎಂದು ದೇವರದಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಇದೇ ವೇಳೆ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ದೇವರಾಜ್, ಆಟೋ ನಗರ ಘಟಕದ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸತೀಶ್, ಹರೀಶ್, ಶಂಕರೇಗೌಡ, ಲಕ್ಷ್ಮಣ್, ನವೀನ್ ಕುಮಾರ್, ಕಿರಣ್, ಅಜೀತ್, ಕುಮಾರ್, ನಿರ್ವಣಯ್ಯ, ಅಮ್ಜದ್ ಸೇರಿದಂತೆ ಅನೇಕರು ಇದ್ದರು.

Special Puja at Kannada Sena Ganapati Temple

About Author

Leave a Reply

Your email address will not be published. Required fields are marked *

You may have missed