September 16, 2024

ಉತ್ತಮ ಕಾರ್ಯದಿಂದ ಅಧಿಕಾರಿಗಳ ವರ್ಗಾವಣೆ ಜನಮಾನಸದಲ್ಲಿ ಉಳಿಯುತ್ತಾರೆ

0
ತುಮಕೂರಿಗೆ ವರ್ಗಾವಣೆಗೊಂಡಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಅವರ ಬೀಳ್ಕೊಡುಗೆ

ತುಮಕೂರಿಗೆ ವರ್ಗಾವಣೆಗೊಂಡಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಅವರ ಬೀಳ್ಕೊಡುಗೆ

ಚಿಕ್ಕಮಗಳೂರು: ಅಧಿಕಾರಾವಧಿಯಲ್ಲಿ ಜನಸ್ನೇಹಿಯಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ವರ್ಗಾವಣೆ ಅಥವಾ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದರು

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತುಮಕೂರಿಗೆ ವರ್ಗಾವಣೆಗೊಂಡಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಅಥವಾ ನಿವೃತ್ತಿ ಸಹಜ ಪ್ರಕ್ರಿಯೆ ಮತ್ತು ಅನಿವಾರ್ಯ. ವರ್ಗಾವಣೆ ಅಥವಾ ನಿವೃತ್ತಿ ಎಲ್ಲರಿಗೂ ಆಗುತ್ತದೆ ಆದರೆ ಅವರು ಅಧಿಕಾರ ಅವಧಿಯಲ್ಲಿ ನಡೆದು ಕೊಂಡ ರೀತಿ ಮಾಡಿದ ಜನಪರ ಕಾರ್ಯಗಳು ಮುಖ್ಯವಾಗುತ್ತವೆ ಎಂದರು

ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಅದು ಮುಖ್ಯವಲ್ಲ ಅಧಿಕಾರಿಗಳಿಗೆ ಎಲ್ಲಾ ಕಡೆಗಳಲ್ಲೂ ಪೂರಕವಾದ ವಾತಾವರಣ ಇರುವುದಿಲ್ಲ ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರಕ ಉತ್ತಮವಾದ ವಾತಾವರಣವಿದೆ ಇಲ್ಲಿ ಜಿ ಪ್ರಭು ಸೇರಿದಂತೆ ಎಲ್ಲಾ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ ಚುನಾವಣೆ ಸೇರಿದಂತೆ ಎಲ್ಲಾ ಸಂದರ್ಭಗಳಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು

ಜಿ. ಪ್ರಭು ಅವರು ಒಬ್ಬ ಅತ್ಯುತ್ತಮ ಜನಪರ ಅಧಿಕಾರಿ ಸರಳ ನಗುಮುಖದ ವ್ಯಕ್ತಿತ್ವದ ಅವರು ಅಭಿವೃದ್ಧಿಯಲ್ಲಿ ತಮ್ಮೊಂದಿಗೆ ಉತ್ತಮವಾಗಿ ಸಹಕರಿಸಿದ್ದರು ಎಂದ ಜಿಲ್ಲಾಧಿಕಾರಿಗಳು ಪ್ರಭು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ ನಾವು ನಿರ್ವಹಿಸುವ ಕರ್ತವ್ಯದಿಂದ ನಮ್ಮನ್ನು ಗುರುತಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಒಂದು ತಂಡದ ರೀತಿಯಲ್ಲಿ ಕೆಲಸ ಮಾಡಲಾಗಿದೆ. ನಾವು ನಿರ್ವಹಿಸುವ ಕಾರ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಿರ ಬೇಕು ಎಂದ ಅವರು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಮಾಡಿದ್ದಾರೆಎಂದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು ತಮ್ಮ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳ ಗುಣಗಾನ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ತಮಗೆ ಅತ್ಯಂತ ತೃಪ್ತಿ ಮತ್ತು ಹೆಮ್ಮೆ ತಂದಿದೆ ಎಂದರು, ಜಿಲ್ಲೆಯಲ್ಲಿನ ಸೇವಾ ಅವಧಿಯಲ್ಲಿ ತಾವು ಜನರ ಪ್ರೀತಿ ವಿಶ್ವಾಸ ಗಳಿಸುವ ರೀತಿಯಲ್ಲಿ ತಮ್ಮ ಹುದ್ದೆಗೆ ಗೌರವ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು

Transferring officers with good performance will remain popular

About Author

Leave a Reply

Your email address will not be published. Required fields are marked *