ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿ ಮುಂಡಾಳ ಸಮಾಜದ ವತಿಯಿಂದ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ
ಚಿಕ್ಕಮಗಳೂರು: ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿ ಮುಂಡಾಳ ಸಮಾಜ ಜಿಲ್ಲಾ ಶಾಖೆ ವತಿಯಿಂದ ನೂತನ ಜಿಲ್ಲಾಧಿಕಾರಿಗಳಾದ ಮೀನಾನಾಗರಾಜ್ ಅವರಿಗೆ ಅಭಿನಂದಿಸಿ ಮನವಿ ಸಲ್ಲಿಸಲಾಯಿತು
ಅಖಿಲ ಭಾರತ ಶ್ರೀ ಭಗವಾನ್ ಬಬ್ಬು ಸ್ವಾಮಿ ಮುಂಡಾಳ ಸಮಾಜ ಜಿಲ್ಲಾಧ್ಯಕ್ಷ ವೈ.ಜಿ.ಸುರೇಶ್ ಮನವಿ ನೀಡಿ ಮಾತನಾಡಿ ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಅಧಿಕ ಮುಂಡಾಳ ಸಮುದಾಯದವರು ಇದ್ದಾರೆ ಅವರದ್ದೇ ಆದಂತಹ ನಿವೇಶನಗಳು ಇರುವುದಿಲ್ಲ ಅಂತವರಿಗೆ ನಿವೇಶನ ಒದಗಿಸುವುದು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮದಾಯ ನಿರ್ಮಿಸಲು ನಿವೇಶನ ಅವಶ್ಯಕತೆ ಇರುವುದರಿಂದ ನಿವೇಶನ ನೀಡುವುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜೆ.ಸಿ.ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಆರ್.ಜಾನವ್, ಖಜಾಂಚಿ ಸುಧಾಕರ್, ಸದಸ್ಯರುಗಳಾದ ವಿಜಯ್, ಹರೀಶ್, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
An appeal to the new District Collector on behalf of the All India Shri Bhagwan Babbu Swamy Mundala Samaj