ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿದ ತೃಪ್ತಿ ನನಗಿದೆ
ಚಿಕ್ಕಮಗಳೂರು: ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಿದ ತೃಪ್ತಿ ನನಗಿದೆ ಎಂದು ನ್ಯೂ ಇಂಡಿಯಾ ಅಸ್ಸುರೇನ್ಸ್ ಕಂಪನಿಯಲ್ಲಿ ಸೇವೆಸಲ್ಲಿಸಿ ಸೇವಾ ಅವಧಿ ಪೂರೈಸಿ ನಿವೃತ್ತರಾದ ಜಯಶ್ರೀ ತಿಳಿಸಿದರು.
ನ್ಯೂ ಇಂಡಿಯಾ ಅಸ್ಸುರೇನ್ಸ್ ಕಂಪನಿಯಲ್ಲಿ ನಿವೃತ್ತರಾದ ಜಯಶ್ರೀ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಯಾವುದೇ ಇಲಾಖೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವಾಗ ಗ್ರಾಹಕರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿ ಅವರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಾಗ ನಮ್ಮ ಕೆಲಸವು ಯಶಸ್ವಿಯಾಗುವುದರ ಜೊತೆಗೆ ಕಂಪನಿಗಳು ಸಹ ಉತ್ತಮವಾಗಿರುತ್ತವೆ ಎಂದರು.
ನಾನು ನನ್ನ ಅವಧಿಯಲ್ಲಿ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ಹೆಚ್ಚಿನದೇನನ್ನು ಮಾಡಿಲ್ಲ, ನನ್ನ ಅರ್ಹತೆಗೆ ಮೀರಿದ ಹೋಗಳಿಕೆಯನ್ನು ಮಾಡಿದ್ದೀರಿ, ನನ್ನದೇನಾದರು ಸಾಧನೆ ಇದ್ದರೆ ಅದಕ್ಕೆ ಸಹದ್ಯೋಗಿಗಳು, ಪ್ರಥಿನಿಧಿಗಳು, ಸರ್ವೆಯರ್ಗಳು ಮತ್ತು ವ್ಯವಸ್ಥಾಪಕರಿಂದಷ್ಟೇ ಸಾದ್ಯವಾಗಿದೆ ಎಂದ ಅವರು ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು.
ನ್ಯೂ ಇಂಡಿಯಾ ಅಸ್ಸುರೇನ್ಸ್ ಕಂಪನಿಯ ವ್ಯವಸ್ಥಾಪಕ ಗಣೇಶ್ಪ್ರಭು ಅಭಿನಂದಿಸಿ ಮಾತನಾಡಿ ಜಯಶ್ರೀ ರವರ ಸೇವೆ ಗ್ರಾಹಕರು ಹಾಗೂ ಸಹದ್ಯೋಗಿಗಳೊಂದಿಗೆ ಅವರ ಸೇವೆ ಅತ್ಯುತ್ತಮವಾಗಿತ್ತು, ಅವರ ತೆರವಾದ ಸ್ಥಾನಕ್ಕೆ ಸೂಕ್ತ ಉದ್ಯೋಗಿಗಳು ಸಿಗಲಾರರು, ಎಲ್ಲಾ ಉದ್ಯೋಗಿಗಳು ವರ್ಗಾವಣೆ ಅಥವಾ ನಿವೃತ್ತಿ ಸಂದರ್ಭದಲ್ಲಿ ನನ್ನಿಂದ ಯಾರಿಗಾದರು ನೋವಾಗಿದ್ದರೆ ಕ್ಷಮಿಸಿ ಎಂದು ಹೇಳತ್ತಾರೆ, ಆದರವರು ಆರೀತಿ ಕೇಳುವ ಅವಶ್ಯಕತೆಯೇ ಇಲ್ಲ, ಏಕೆಂದರೆ ಅವರು ಯಾರನ್ನೂ ನೋಯಿಸುವುದಾಗಲಿ, ತೊಂದರೆ ಕೊಡುವುದಾಗಲಿ ಮಾಡಿದವರಲ್ಲ ಎಂದರು.
ಈ ಸಂದರ್ಭದಲ್ಲಿ ಮಂಜೇಗೌಡ, ಸ್ಟೀವನ್, ನಾಗೇಂದ್ರ ನಾಯಕ, ಸತ್ಯನಾರಾಯಣ ಸ್ವಾಮಿ, ರಮ್ಯ.ಸಿ.ಎಸ್, ತೇಜಸ್ವಿ.ಸಿ.ಎಸ್, ಹೆಚ್.ಡಿ.ಉಮಾ ಉಪಸ್ಥಿತರಿದ್ದರು ಚಂದ್ರಶೇಖರ್ ಪ್ರಾರ್ಥಿಸಿ, ಯೋಗೀಶ್ ನಿರೂಪಿಸಿ, ಸ್ವಾತಿ ವಂದಿಸಿದರು.
I have the satisfaction of working as per customer’s requirement