September 19, 2024

ಹಾಸ್ಯನಟ ಚಂದ್ರಪ್ರಭರಿಂದ ನಗರದಲ್ಲಿ ಅಪಘಾತ

0

ಚಿಕ್ಕಮಗಳೂರು: ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿಯ ಹಾಸ್ಯನಟ ಚಂದ್ರಪ್ರಭ ನಗರದ ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಸವಾರನಿಗೆ ಗುದ್ದಿದ ಪರಿಣಾಮ ಅಪಘಾತ ನಡೆದಿದೆ.

ಹಿಟ್ ಅಂಡ್ ರನ್ ಅಪಘಾತ ಇದಾಗಿದ್ದು, ಹಾಸ್ಯನಟ ಚಂದ್ರಪ್ರಭಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. ಏಂ ೫೧ ಒಆ ೯೫೫೨ ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಇದಾಗಿದೆ. ಅಪಘಾತ ಮಾಡಿದ ನಂತರ ಕಾರು ನಿಲ್ಲಿಸದೆ ಚಾಲಕ ಪರಾರಿ ಆಗಿದ್ದಾರೆ. ಇನ್ನು ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಗುದ್ದಿದ ಬೆನ್ನಲ್ಲೇ ಬೈಕ್ ಅಪಘಾತದಲ್ಲಿ ರಸ್ತೆಗೆ ಬಿದ್ದ ಮಾಲತೇಶ್ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳು ಮಾಲತೇಶ್ ನಾಗೇನಹಳ್ಳಿ ನಿವಾಸಿ ಆಗಿದ್ದಾನೆ. ಈತ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅಪಘಾತ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾಲ್ತೇಶ್ ಹಾಸನಕ್ಕೆ ರವಾನೆ ಮಾಡಲಾಗಿದೆ. ಸಂಬಂಧಿಕರಿಂದ ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.

ನಾಳೆ ವಿಚಾರಣೆಗೆ ಹಾಜರು: ಇನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲಿಯೇ ಹಾಸ್ಯನಟ ಚಂದ್ರಪ್ರಭನನ್ನು ಸಂಪರ್ಕ ಮಾಡಿದ ಪೊಲೀಸರು, ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಇಂದು ನನಗೆ ಶೂಟಿಂಗ್ ಇದ್ದು, ನಾಳೆ ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ.

Accident in the city by comedian Chandraprabha

About Author

Leave a Reply

Your email address will not be published. Required fields are marked *

You may have missed