ಚಿಕ್ಕಮಗಳೂರು ಜಿಲ್ಲೆಯ ಛಾಯಾ ಸಾಧಕರಿಗೆ ಗುರುವಂದನಾ ಪುರಸ್ಕಾರ
ಚಿಕ್ಕಮಗಳೂರು: ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಜಿಲ್ಲೆಯ ಛಾಯಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಡಿದೆ.
ಇಮೇಜ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಛಾಯಾ ಸಾಧಕರನ್ನಾಗಿ ಬೀರೂರಿನ ನರಸಿಂಹಮೂರ್ತಿ ಮತ್ತು ಗುರುವಂದನಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರವಿಕುಮಾರ್, ಕವಿತಗೋಪಾಲ್, ಕಡೂರಿನ ವೆಂಕಟೇಶ್, ಶಿಬ್ಬುಅಂಥೋಣಿ, ಅಜಂಪುರದಮಂಜುನಾಥ್,ಸುರೇಶ್, ತರೀಕೆರೆಯ ರುದ್ರೇಶ್, ಕಾಕಿಷ್ಮೌಲಾ(ಖದೀರ್), ಮೂಡಿಗೆರೆಯ ಲೋಹಿತ್, ಚಂದ್ರು, ಕಳಸದ ವಾಸುದೇವ, ಅಶೋಕ್, ಎನ್.ಆರ್.ಪುರದ ಗಿರೀಶ್, ಜಗದೀಶ್ ರವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಪರಮೇಶ್, ಉಪಾಧ್ಯಕ್ಷರಾದ ನಾಗೇಶ್, ಜಿಲ್ಲಾಧ್ಯಕ್ಷರಾದ ಜಯಚಂದ್ರ, ಕಾರ್ಯದರ್ಶಿ ರೇಣುಕಪ್ಪ ಮತ್ತಿತರರು ಉಪಸ್ಥಿತರಿದ್ದರು.
Guruvandana Puraskara for Chaya Sadhaka