ಸೆ.14ಕ್ಕೆ ಚಟ್ನಳ್ಳಿಮಹೇಶ್ಗೆ ನುಡಿ ಮಾಣಿಕ್ಯ ಗೌರವ ಸಮರ್ಪಣೆ
ಚಿಕ್ಕಮಗಳೂರು: ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಠನದ ವತಿಯಿಂದ ಇದೇ ತಿಂಗಳ ೧೪ರಂದು ಖ್ಯಾತ ಸಾಹಿತಿ ವಾಗ್ಮಿ ಚಟ್ನಳ್ಳಿಮಹೇಶ್ ರವರಿಗೆ ನುಡಿ ಮಾಣಿಕ್ಯ ಅಭಿದಾನ ಗೌರವ ನೀಡಿ ಸನ್ಮಾನಿಸಲಾಗುವುದು ಎಂದು ಸೂರಿ ಪ್ರತಿಷ್ಠನದ ಮುಖ್ಯಸ್ಥ ಪ್ರಭು ಸೂರಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಜ್ಜಂಪುರ ಜಿಲ್ಲೆಯ ಸೂರಿ ಸಾಂಸ್ಕೃತಿಕ ಪ್ರತಿ?ನ ಆರಂಭವಾಗಿ ದಶಕಗಳೆ ಕಳೆದಿದ್ದು ಅನೇಕ ಸಾಂಸ್ಕೃತಿಕ, ಸಾಹಿತ್ಯಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಅದರ ಭಾಗವಾಗಿ ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೪ರಂದು ಚಟ್ನಳ್ಳಿ ಮಹೇಶ್ ಅವರ ತೋಟದಲ್ಲಿ ಏರ್ಪಾಡಿಸಲಾಗಿದೆ ಎಂದರು.
ನಗರದ ಮಾಧ್ಯಮ ಸಂಸ್ಕೃತಿ ಪ್ರತಿ?ನ ನಡೆಸುತ್ತಿರುವ ಮುತ್ತಿನಂತ ಮಾತು ಕಾರ್ಯಕ್ರಮದಲ್ಲಿ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಮುನ್ನಡೆದಿರುವ ಚಟ್ನಳ್ಳಿ ಮಹೇಶ್ ರವರಿಗೆ ಈ ಗೌರವ ಸಮರ್ಪಿಸುತ್ತಿದ್ದು ಸಾಹಿತ್ಯ ಪ್ರೇಮಿಗಳಿಗೆ ಚಟ್ನಳ್ಳಿ ಮಹೇಶ್ ಅವರಿಂದ ಅನೇಕ ವಿಚಾರಧಾರೆಗಳು ಪ್ರವಚನ ಪ್ರವಾಹ ನಡೆಯುತ್ತೆ ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಡೆದಂತಹ ಮುತ್ತಿನಂತ ಮಾತು ಮಾಲಿಕೆ ಶೋತೃಗಳ ಮನದಲ್ಲಿ ಸದ್ಭಾವನ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದೆ. ಈ ಪ್ರಯುಕ್ತ ೧೪ರ ಸಂಜೆ ಆರು ಗಂಟೆಗೆ ಹಲವಾರು ಸಾಹಿತ್ಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪರಮಪೂಜ್ಯ ಗುರುಗಳು, ಸಾಹಿತ್ಯ ಧುರೀಣರು ಕಲಾವಿದರನ್ನು ಒಳಗೊಂಡ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಅಜ್ಜಂಪುರ ಜಿ.ಸೂರಿ ಪ್ರತಿ?ನ ಖಜಾಂಚಿ ರುದ್ರೇಶ್ ಕಡೂರು, ಭಾಗವತಿಹರೀಶ್ ಉಪಸ್ಥಿತರಿದ್ದರು.
Ajjampur Suri Foundation