September 20, 2024
ಸಸ್ಯ ಶ್ಯಾಮಲ ಕಾರ್ಯಕ್ರವನ್ನು ಉದ್ಘಾಟನೆ

ಸಸ್ಯ ಶ್ಯಾಮಲ ಕಾರ್ಯಕ್ರವನ್ನು ಉದ್ಘಾಟನೆ

ಚಿಕ್ಕಮಗಳೂರು: ಹೆಚ್ಚು ಹೆಚ್ಚು ಅರಣ್ಯ ಮತ್ತು ಪರಿಸರ ಉಳಿಸಿದಾಗ ಮಾತ್ರ ಆಮ್ಲಜನಕ ಉತ್ಪತ್ತಿಯಾಗಿ ಉಸಿರಾಟದ ಕ್ರಿಯೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಅಲ್ಲಂಪುರದ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ ಮತ್ತು ಅಲ್ಲಂಪುರ ಗ್ರಾಮಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಸ್ಯ ಶ್ಯಾಮಲ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಸ್ಯ ಶ್ಯಾಮಲ ಕಾರ್ಯಕ್ರಮದ ಮೂಲಕ ಅರಣ್ಯ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೫೦ ಲಕ್ಷ ಸಸಿಗಳನ್ನು ನೆಡಲು ಗುರಿಹೊಂದಲಾಗಿದ್ದು ಪ್ರಯೋಗಿಕವಾಗಿ ಅಲ್ಲಂಪುರ ಶಾಲ ಆವರಣದಲ್ಲಿ ೫೦ ಸಸಿಗಳನ್ನು ನೆಡುವುದರ ಮೂಲಕ ಸಾಂಕೇತಿಕವಾದ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ನಾವುಗಳೆ ಅರಣ್ಯ, ಕಾಡು, ಪರಿಸರ ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ವಿಷಾಧಿಸಿದ ಅವರು ಇದರ ಪರಿಣಾಮದಿಂದಾಗಿ ಅಸಮತೋಲನ ಉಂಟಾಗಿದೆ ಈಗಾಗಲೆ ಜಿಲ್ಲೆಯ ಕಳಸ, ಶೃಂಗೇರಿ ಈ ಮೂರು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ ಎಂದರು.

ಜಿಲ್ಲೆ ಮಲೆನಾಡು ಬಯಲು ಪ್ರದೇಶವನ್ನು ಹೊಂದಿದ್ದು ಚಿಕ್ಕಮಗಳೂರು ತಾಲ್ಲೂಕಿನ ೨ ಹೋಬಳಿಗಳಾದ ಲಕ್ಯಾ, ಸಖರಾಯಪಟ್ಟಣ ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರದಲ್ಲಿ ಹಕ್ಕೋತ್ತಾಯ ಮಾಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮಳೆಗಾಗಿ ಪ್ರಾರ್ಥಿಸಿ ದೇವರಲ್ಲಿ ಮೊರೆ ಹೋಗುವುದು ಸಂಪ್ರದಾಯಿಕವಾಗಿ ಧಾರ್ಮಿಕ ಆಚರಣೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ, ಉಳಿಸಿದರೆ ಮಾತ್ರ ವೈಜ್ಞಾನಿಕವಾಗಿ ಮಳೆ ಬರುತ್ತದೆ ಪರಿಸರದ ಸಮತ್ತೋಲನವಾಗುತ್ತದೆ ಎಂದರು.

ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದರಲ್ಲಿ ಕೈ ಜೋಡಿಸುವ ಮೂಲಕ ಪರಿಸರ ಉಳಿಸುವುದು ಎಲ್ಲರ ಕರ್ತವ್ಯ ಎಂಬ ಜವಾಬ್ದಾರಿ ಅರಿತು ಕೆಲಸ ಮಾಡಲು ಸೂಚಿಸಿದರು.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂತಹ ಕಾರ್ಯಕ್ರಮಗಳು ಜೋಡಣೆ ಮಾಡಿದಾಗ ಮಾತ್ರ ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಸಸಿ ನೆಡುವುದು ಮುಖ್ಯವಲ್ಲ ಅವುಗಳನ್ನು ನೀರೆರೆದು ಪೋಷಿಸಿದಾಗ ಪರಿಸರ ಉಳಿಯುತ್ತದೆ ಎಂದು ಹೇಳಿದರು.

ಪ್ರತಿ ಮನೆಯಿಂದ ಕನಿಷ್ಠ ೨ ಸಸಿ ನೆಟ್ಟು ಪೋಷಿಸುವ ಮೂಲಕ ಪ್ರತಿಯೊಬ್ಬರಲ್ಲಿ ಪರಿಸರ ಜಾಗೃತಿ ಬೆಳಯಬೇಕು ನಗರ ಪ್ರದೇಶದಲ್ಲಿ ಮನೆ ನಿರ್ಮಿಸುವವರಿಗೆ ನಗರ ಸಭೆಯಿಂದ ಪರವಾನಗಿ ಕೊಡುವ ಸಂದರ್ಭದಲ್ಲಿ ಸೋಲಾರ್, ಮಳೆ ನೀರು ಕೊಯ್ಲ ಮಾಡಿಕೊಳಬೇಕೆಂದು ಕಡ್ಡಾಯ ಮಾಡಿ ನಿರ್ಣಯ ಮಾಡಿರುವುದಾಗಿ ತಿಳಿಸಿದ ಅವರು ಮನೆ ಮುಂಭಾಗ ಎಲ್ಲರು ಸಸಿ ನೆಡಬೇಕೆಂದು ನಗರಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ ರಂಗನಾಥ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಮುಖ್ಯ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ತಾ.ಪಂ ಇ.ಓ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಧ್ಯಕ್ಷರು,

ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಾರಂಭದಲ್ಲಿ ಸಾಮಾಜಿಕ ಅರಣ್ಯ ವಿಭಾಗದ, ಪ್ರಭಾರ ಉಪರಣ್ಯ ಸಂರಕ್ಷಣಾಧಿಕಾರಿ ಮೋಹನ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಜೋಗಪ್ಪ ಸ್ವಾಗತಿಸಿ ವಂದಿಸಿದರು.

Kuvempu Centenary Government Senior Primary School Allampur

About Author

Leave a Reply

Your email address will not be published. Required fields are marked *