ಚಿಕ್ಕಮಗಳೂರು: ಬನಶಂಕರಿ ಮಹಿಳಾ ಸಂಘದ ವತಿಯಿಂದ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ಗೌರಿ-ಗಣೇಶ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆ ಗಂಗೆ ತಂದು ಲಲಿತಾ ಸಹಸ್ರನಾಮ ನಂತರ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮಹಿಳೆಯರೆಲ್ಲರೂ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಎಲ್ಲಾ ಮಹಿಳೆಯರಿಗೆ ಅರಿಶಿನ, ಕುಂಕುಮ, ಬಳೆ, ಬಟ್ಟಲ ಅಕ್ಕಿ, ಗೌರಿ ಎಳೆ, ಪ್ರಸಾದ ವಿತರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷೆ ಸುವರ್ಣಾ ಕೇಶವಮೂರ್ತಿ ಮಾತನಾಡಿ, ಕಳೆದ ೨೦ ವರ್ಷದಿಂದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗೌರಿ ಕೂರಿಸುತ್ತೇವೆ ಸಂಘದ ಎಲ್ಲಾ ಸದಸ್ಯರಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬನಶಂಕರಿ ಮಹಿಳಾ ಸಂಘದ ಪ್ರದಾನ ಕಾರ್ಯದರ್ಶಿ ಧನಲಕ್ಷ್ಮೀಗೋಕುಲ್, ಉಪಾಧ್ಯಕ್ಷೆ ರಾಧಾರಾಜ್ಕುಮಾರ್, ಖಜಾಂಚಿ ಶ್ಯಾಮಲಾರಾಜು, ನಿರ್ದೇಶಕರುಗಳಾದ ಭಾರತಿರಂಗನಾಥ್, ಭಾಗ್ಯಮೋಹನ್, ಗೀತಾಗಂಗಾಧರ್, ಮಂಜುಳಾಪುಟ್ಟರಾಜು, ರತ್ನರವಿಕುಮಾರ್, ನಿರ್ಮಲಾರವಿಕುಮಾರ್ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷೆ ಪುಷ್ವರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು
Gauri festival celebration by Banashankar Mahila Sangh