September 19, 2024

ನ.20 ರಿಂದ ನಗರದಲ್ಲಿ ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

0
ರಾಣಾ ಸ್ಪೋರ್ಟ್ಸ್ ಕ್ಲಬ್ ಖಜಾಂಚಿ ನಟರಾಜ್ ಪತ್ರಿಕಾಗೋಷ್ಠಿ

ರಾಣಾ ಸ್ಪೋರ್ಟ್ಸ್ ಕ್ಲಬ್ ಖಜಾಂಚಿ ನಟರಾಜ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ರಾಜ್ಯ ಪ್ರಶಸ್ತಿ ವಿಜೇತೆ ದಿ: ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಇಲ್ಲಿನ ರಾಣಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನ.೨೦ ರಿಂದ ೨೬ ರವರೆಗೆ ನಗರದ ಸುಭಾ? ಚಂದ್ರ ಬೋಸ್ ಆಟದ ಮೈದಾನದಲ್ಲಿ ೬ನೇ ಆವೃತ್ತಿಯ ಟಿ-೨೦ ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನ್ನು ಆಯೋಜಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಖಜಾಂಚಿ ನಟರಾಜ್ ಈ ವಿ?ಯ ತಿಳಿಸಿ ಸುಮಾರು ೧೫೦ಕ್ಕಿಂತ ಹೆಚ್ಚು ಶಿವಮೊಗ್ಗ ವಲಯದ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ) ಆಟಗಾರರು ನೋಂದಾಣಿಯನ್ನು ಮಾಡಿಕೊಂಡಿದ್ದು, ಅದರಲ್ಲಿ ೦೫ ತಂಡದ ಮಾಲೀಕರು ಆಟಗಾರರನ್ನು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು, ಈಗಾಗಲೇ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.

ಐ.ಪಿ.ಎಲ್ ಮಾದರಿಯ ಈ ಟೂರ್ನಮೆಂಟ್‌ನಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ರೂ.೧೦೦,೦೦೦/- ಹಾಗೂ ಆಕ?ಕ ಪಾರಿತೋ?ಕ, ದ್ವಿತೀಯ ಬಹುಮಾನ ರೂ.೫೦,೦೦೦/- ಹಾಗೂ ಆಕ?ಕ ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು.
ತಂಡದ ಮಾಲೀಕರಾದ ಅಕ್ಷಯ ಬ್ಲಾಸ್ಟರ್‍ಸ್ ಶರದ್, ರೈಸಿಂಗ್ ಸ್ಟಾರ್ ತಾಮ್ಸನ್, ವಸಿಷ್ಠ ಇ-ಸ್ಪೋರ್ಟ್ಸ್ ಸಂದೀಪ್, ಆಲ್-ರೆಹಮಾನ್ ವಾರಿಯರ್‍ಸ್ ಅಫೀಜ್, ರಕೀನ್ ಇ- ಸ್ಪೋರ್ಟ್ಸ್ ರಕೀನ್.

ಪಂದ್ಯಾವಳಿಗಳ ಉದ್ಘಾಟನೆ ನ.೨೦ರ ಸೋಮವಾರ ಬೆಳಿಗ್ಗೆ ೮.೩೦ ಕ್ಕೆ ನಗರದ ಸುಭಾ? ಚಂದ್ರ ಬೋಸ್ ಆಟದ ಮೈದಾನದಲ್ಲಿ ನೆರವೇರಲಿದ್ದು, ಸಮಾರೋಪ ಸಮಾರಂಭವು ನ.೨೬ರ ಸಂಜೆ ೫.೩೦ಕ್ಕೆ ನಡೆಯಲಿದೆ ಎಂದರು.

White Leather Ball Cricket Tournament

About Author

Leave a Reply

Your email address will not be published. Required fields are marked *

You may have missed