September 16, 2024
ಬಿಇಡಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ

ಬಿಇಡಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಜೊತೆಗೆ ಚರ್ಚಾಸ್ಪರ್ಧೆಗಳಲ್ಲಿ ಹೆಚ್ಚು ಮುತುವರ್ಜಿ ಭಾಗವಹಿಸಿದರೆ ಭವಿಷ್ಯದ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಜ್ಯೋತಿನಗರ ಸಮೀಪದ ಮಲೆನಾಡು ವಿದ್ಯಾಸಂಸ್ಥೆ ಪ್ರಾಯೋಗಿಕ ಪ್ರೌಢಶಾಲೆ ಸಹಯೋಗದಲ್ಲಿ ಮಂಗಳ ವಾರ ಬಿಇಡಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆಯ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚರ್ಚಾಸ್ಪರ್ಧೆ ಸೇರಿದಂತೆ ಬೇರ್‍ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಕೇವಲ ಬಹುಮಾನಕ್ಕೆ ಮಾತ್ರ ಸೀಮಿ ತರಾಗ ಕೂಡದು. ಸ್ಪರ್ಧೆಗಳಲ್ಲಿ ಪಡೆದುಕೊಂಡ ಅನುಭವ ಹಾಗೂ ತಿಳಿಯದ ಪ್ರಶ್ನೆಗಳ ಕಲಿಕೆಗೆ ಅನುಕೂಲ ವಾಗಲಿದ್ದು ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡು ಯಶಸ್ಸು ಗಳಿಸಬೇಕು ಎಂದು ಸಲಹೆ ಮಾಡಿದರು.

ವಿದ್ಯಾರ್ಥಿದೆಸೆಯಿಂದಲೇ ಮಕ್ಕಳು ಚರ್ಚಾಸ್ಪರ್ಧೆಯ ವಿಷಯಗಳ ಬಗ್ಗೆ ಹೆಚ್ಚು ಅಭ್ಯಾಸಿಸಬೇಕು. ಇದರಿಂದ ಭವಿಷ್ಯದ ಎಂತಹ ಸವಾಲುಗಳನ್ನು ಬಂದರೂ ಎದುರಿಸುವ ಆತ್ಮಸೆರ್ಯ ಮೂಡಲಿದೆ ಎಂದ ಅವರು ಒಂದು ಕಲ್ಲಿಗೆ ಹಲವಾರು ಏಟುಗಳು ತಿಂದು ವಿಗ್ರಹವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ಶತತ ಪ್ರಯತ್ನದಿಂದ ಮಾತ್ರ ಉತ್ತಮ ಹೆಸರು ಸಂಪಾದಿಸಬಹುದು ಎಂದರು.

ನವೆಂಬರ್ ತಿಂಗಳು ಮಾತ್ರ ಕನ್ನಡಾಭಿಮಾನ ತೋರುವ ತಿಂಗಳಾಗದೇ ಬರವಣಿಗೆ, ಕನ್ನಡ ಪುಸ್ತಕ ಓದುವ ಹಾಗೂ ಇತರರೊಂದಿಗೆ ಮಾತೃಭಾಷೆಯಲ್ಲಿ ಮಾತನಾಡುವ ಕಲೆಯನ್ನು ರೂಢಿಸಿಕೊಂಡಾಗ ನಮ್ಮತನವನ್ನು ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಮಾತೃಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡ ಬೇಕು ಎಂದು ಹೇಳಿದರು.

ಎಂ.ಇ.ಎಸ್ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಚಿಂತಿಸಿ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಮುಂದೆ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ವಿವೇಕಾನಂದರು ಕೂಡಾ ವಿದೇಶದಲ್ಲಿ ನೀಡಿದ ದಿಕ್ಸೂಚಿ ಭಾಷಣದಿಂದಲೇ ಇಡೀ ಪ್ರಪಂಚ ಮಾತನಾಡುವಂತಾಯಿತು ಎಂದರು.

ಚರ್ಚಾಸ್ಪರ್ಧಾ ಆಯೋಜನೆಯಲ್ಲಿ ಎಂಇಎಸ್ ಸಂಸ್ಥೆ ಹಾಗೂ ಶಾಂತಕುಮಾರಿ ರಾಜು ಅವರ ಪ್ರಾಯೋ ಕತ್ವದಲ್ಲಿ ಹಲವಾರು ವರ್ಷಗಳಿಂದ ಕಾರ್ಯಕ್ರಮ ರೂಪಿಸಿದ್ದು ಇದೇ ಮೊದಲ ಬಾರಿಗೆ ಶಾಲೆಗೆ ಪ್ರಥಮ ಸ್ಥಾನ ಲಭಿಸಿರುವುದು ಖುಷಿ ನೀಡಿದೆ. ಇದೇ ರೀತಿ ಮಕ್ಕಳು ಹೆಚ್ಚೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸಿನ ಮೆಟ್ಟಿಲೇರ ಬೇಕು ಎಂದು ಆಶಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಇ.ಎಸ್. ಅಧ್ಯಕ್ಷ ಎನ್.ಕೇಶವಮೂರ್ತಿ ಮಕ್ಕಳಿಗೆ ಚರ್ಚಾ ಸ್ಪರ್ಧೆಯಲ್ಲಿ ರಾಜಕೀಯ ಹೊರತುಪಡಿಸಿ ವೈಚಾರಿಕತೆ ಮೂಡಿಸುವ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಮಕ್ಕಳು ಬೌದ್ಧಿಕವಾಗಿ ಮುನ್ನೆಡೆಯಲು ಸಾಧ್ಯ ಎಂದು ಸಲಹೆ ಮಾಡಿದರು.

ಇದೇ ವೇಳೆ ಸುಮಾರು ೧೫ ಶಾಲೆಗಳಿಂದ ೩೦ ವಿದ್ಯಾರ್ಥಿಗಳು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪರ- ವಿರುದ್ಧ ಸ್ಪರ್ಧೆಯಲ್ಲಿ ಎಂಇಎಸ್ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ಸಂಜೀವಿನಿ ವಿದ್ಯಾಸಂಸ್ಥೆ ಹಾಗೂ ತೃತೀಯ ಸ್ಥಾನವನ್ನು ಮೊರಾರ್ಜಿ ವಸತಿ ಶಾಲೆ ಬೀಕನಹಳ್ಳಿ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಪ್ರಾಯೋಗಿಕ ಪ್ರೌಢಶಾಲೆ ಮುಖ್ಯಶಿಕ್ಷಕಿ ಕೌಸರ್ ಫಾತಿಮಾ, ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ಶಿಕ್ಷಕರಾದ ಸದಾಶಿವ, ಪ್ರತಿಮಾ, ಸುನೀತಾ, ತೀರ್ಪುಗಾರರಾದ ಹೇಮಾವತಿ, ಹನುಮಂತಪ್ಪ, ಪ್ರಭಾಕರ್ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

City level inter high school debate competition organized in BED college hall

 

About Author

Leave a Reply

Your email address will not be published. Required fields are marked *