September 16, 2024

ವಕೀಲ ಪ್ರೀತಮ್ ಮೇಲೆ ಹಲ್ಲೆ, ಕ್ರಮಕ್ಕೆ ಮಾನವ ಹಕ್ಕುಗಳ ಸಮಿತಿ ಡಿಸಿ ಗೆ ಮನವಿ

0
ವಕೀಲ ಪ್ರೀತಮ್ ಮೇಲೆ ಹಲ್ಲೆ, ಕ್ರಮಕ್ಕೆ ಮಾನವ ಹಕ್ಕುಗಳ ಸಮಿತಿ ಡಿಸಿ ಗೆ ಮನವಿ

ವಕೀಲ ಪ್ರೀತಮ್ ಮೇಲೆ ಹಲ್ಲೆ, ಕ್ರಮಕ್ಕೆ ಮಾನವ ಹಕ್ಕುಗಳ ಸಮಿತಿ ಡಿಸಿ ಗೆ ಮನವಿ

ಚಿಕ್ಕಮಗಳೂರುಎ:  ಕ್ಷುಲ್ಲಕ ಕಾರಣಕ್ಕೆ ವಕೀಲ ಪ್ರೀತಮ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪೋಲೀಸ್ ಸಿಬ್ಬಂದಿಗಳ ಕ್ರಮವನ್ನು ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಸಿ ನಟರಾಜ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೀನಾನಾಗರಾಜ್ ರವರನ್ನು ಭೇಟಿ ಮಾಡಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಗರ ಠಾಣೆಯ ಪೊಲೀಸರು ಮಾಡಿರುವ ಈ ದೌರ್ಜನ್ಯವನ್ನು ಮಾನವ ಹಕ್ಕುಗಳ ಸಮಿತಿಯು ತೀವ್ರವಾಗಿ ಖಂಡಿಸಿದೆ. ಸಾರ್ವಜನಿಕರಿಂದಲೂ ಈ ದೌರ್ಜನ್ಯದಿಂದ ವ್ಯಾಪಕ ಟೀಕೆ ಕೇಳಿಬರುತ್ತಿದ್ದು, ನಗರ ಠಾಣೆಯವರು ಮಾಡಿರುವ ದೌರ್ಜನ್ಯದಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ ಎಂದಿದ್ದಾರೆ.

ಜನಸ್ನೇಹಿಯಾಗಬೇಕಾದ ಪೊಲೀಸರು ಮಾಡಿರುವ ಈ ಕೃತ್ಯವು ತುಂಬಾ ಅಮಾನು?ವಾಗಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮಾನವ ಹಕ್ಕುಗಳ ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ.

ನಗರ ಠಾಣೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರವು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳವರ ಮುಖಾಂತರ ಸರ್ಕಾರವನ್ನು ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ ಕೃ?ಯ್ಯಗೌಡ, ಪದಾಧಿಕಾರಿಗಳಾದ ಡಿ.ಕೆ ಕೃ?ಮೂರ್ತಿ, ತಿಪ್ಪೇರುದ್ರಪ್ಪ, ಬನಶಂಕರಿ ಜೋಷಿ, ಜಗದೀಶ್.ಕೆ.ಆರ್, ಸ್ವರ್ಣಗೌರಿ, ರಾಮಸ್ವಾಮಿ, ಹೆಚ್.ಜೆ ಪರಮೇಶ್ವರ, ನಿಂಗೇಗೌಡ, ಶೈಲಬಸವರಾಜ್, ಶಾಯಿನಾಬೇಗಂ, ಚಂದ್ರಮತಿ, ಸುಶೀಲಮ್ಮ ಉಪಸ್ಥಿತರಿದ್ದರು

Appeal to Human Rights Committee DC

About Author

Leave a Reply

Your email address will not be published. Required fields are marked *