ಜಯಪ್ರಕಾಶ್ ನಾರಾಯಣ್ ಪಾರ್ಕ್ ಅಭಿವೃದ್ಧಿಪಡಿಸುವಂತೆ ಮನವಿ
ಚಿಕ್ಕಮಗಳೂರು: ಗರದ ಜಯಪ್ರಕಾಶ್ ನಾರಾಯಣ್ ಪಾರ್ಕ್ ಅಭಿವೃದ್ಧಿಪಡಿಸುವಂತೆ ನಗರಸಭೆ ಉಪಾಧ್ಯಕ್ಷರಾದ ಅಮೃತೇಶ್ ಚೆನ್ನಕೇಶವ ಅವರಿಗೆ ಜಯಪ್ರಕಾಶ್ ನಾರಾಯಣ ಪಾರ್ಕ್ನ ಸಂಘದ ವತಿಯಿಂದ ಮನವಿ ನೀಡಿದರು.
ಜಯಪ್ರಕಾಶ್ ನಾರಾಯಣ ಪಾರ್ಕ್ ಸಂಘದ ಅಧ್ಯಕ್ಷರಾದ ಕಳವಾಸೆ ರವಿ ಮನವಿ ನೀಡಿ ಮಾತನಾಡಿ ವಾರ್ಡ್ ನಂ. ೩೦ರ ಜಯಪ್ರಕಾಶ್ ನಾರಾಯಣ್ ಪಾರ್ಕ್ ಮತ್ತು ಅಂಗನವಾಡಿ ಕೇಂದ್ರಕ್ಕೆ ನಗರಸಭೆ ವತಿಯಿಂದ ಮೂಲಭೂತ ಸೌಕರ್ಯಗಳಾದ ಚರಂಡಿ ಸ್ವಚ್ಚತೆ, ಹಿರಿಯ ನಾಗರೀಕರು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ವಾಕ್ ಪಾರ್ಕ್, ಕೂರಲು ಬೆಂಚಿನ ವ್ಯವಸ್ಥೆ, ಓಪನ್ ಜಿಮ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಗೇಟ್ ಮತ್ತು ಅಂಗನವಾಡಿ ಕೇಂದ್ರಕ್ಕೆ ಪೆಂಟ್ ವ್ಯವಸ್ಥೆ, ಮಕ್ಕಳಿಗೆ ಆಟಿಕೆ ಸಾಮಗ್ರಿಗಳು ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಮಾಡಿಕೊಡುವಂತೆ ತಿಳಿಸಿದರು.
ನಗರಸಭೆ ಉಪಾಧ್ಯಕ್ಷರಾದ ಅಮೃತೇಶ್ ಚೆನ್ನಕೇಶವ ಮನವಿ ಸ್ವೀಕರಿಸಿ ಮಾತನಾಡಿ ವಾರ್ಡ್ ನಂ. ೩೦ರ ಜಯಪ್ರಕಾಶ್ ನಾರಾಯಣ್ ಪಾರ್ಕ್ ಮತ್ತು ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ನಗರಸಭೆ ಆಯುಕ್ತರ ಬಳಿ ಚರ್ಚಿಸಿ ಹಂತ-ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಲಿಯಾಜ್ ಅಹಮದ್, ತಾಸಿನ್, ನವೀನ್, ರವಿ ಅಭಿದಾಬಾನು, ಆಯಿಷಾ ಬಾನು, ರೂಹಿ, ಶಹನಾಜ್, ಬಾನು, ಬದ್ರು ಉನ್ನಿಸಾ, ನಾಗರತ್ನ, ರೇಷ್ಮ, ಬನಶಂಕರಮ್ಮ ಮತ್ತಿತರರು ಉಪಸ್ಥಿತರಿದ್ದರು.
Request to develop Jayaprakash Narayan Park