ಟೌನ್ ಕೋ-ಆಪರೇಟೀವ್ ಸೊಸೈಟಿಗೆ ಕೇಂದ್ರಸರ್ಕಾರ ಪ್ರಶಸ್ತಿ
ಚಿಕ್ಕಮಗಳೂರು: ಟೌನ್ ಕೋ-ಆಪರೇಟೀವ್ ಸೊಸೈಟಿ ನೂರು ತುಂಬಿದ ಅಂಗವಾಗಿ ಕೇಂದ್ರಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ ಇಂದು ಪತ್ರಿಕಾಗೋಷ್ಠಿಯಲ್ಲಿ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಜಣ್ಣ ಹಾಗೂ ಇತರ ಆಡಳಿತ ಮಂಡಳಿ ಸದಸ್ಯರು ಈ ವಿ?ಯ ತಿಳಿಸಿದರು.
೧೯೦೯ರಲ್ಲಿ ಆರಂಭವಾದ ಸೊಸೈಟಿ ೧೯೧೦ ರಲ್ಲಿ ಅಧಿಕೃತವಾಗಿ ನೋಂದಣಿಯಾಗಿ ಸುಮಾರು ೧೧೪ ವ?ಗಳಿಂದ ನಗರದ ನಾಗರೀಕರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದು ಇದೇ ಡಿ.೨ ಮತ್ತು ೩ರಂದು ದೆಹಲಿಯ ಮೇಳ ಮೈದಾನದಲ್ಲಿ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಶಸ್ತಿ ವಿತರಿಸಿದ್ದಾರೆಂದು ಹೇಳಿದರು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ಶಾ ಅವರು ಮೊಟ್ಟಮೊದಲು ನೂರು ವ? ಪೂರೈಸಿದ ದೇಶದ ಕ್ರೆಡಿಟ್ ಸೊಸೈಟಿಗಳನ್ನು ಗುರುತಿಸಿ ಗೌರವಿಸಿದ್ದು ಚಿಕ್ಕಮಗಳೂರಿನ ಟೌನ್ ಕೋ-ಆಪರೇಟಿವ್ ಸೊಸೈಟಿ ೧೦೦ ವ? ತುಂಬಿದ ಪಟ್ಟಿಯಲ್ಲಿದ್ದು ಪ್ರಶಸ್ತಿಗೆ ಭಾಜನವಾಗಿದೆ ಈ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ ಹಾಗೂ ಸೊಸೈಟಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಹಕಾರ ಸಂಘವು ಸ್ವಂತ ಬಂಡವಾಳದಿಂದಲೇ ವ್ಯವಹರಿಸುತ್ತಿದ್ದು ೪೩೦೦ ಸದಸ್ಯರನ್ನು ಹೊಂದಿದೆ. ೫ ಕೋಟಿಗೂ ಹೆಚ್ಚು ಬಂಡವಾಳವನ್ನು ಹೊಂದಿದೆ ನಗರದಲ್ಲಿ ೧.೫ ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಂಘದ ಆಧಾಯ ಹೆಚ್ಚಿಲಿದ್ದು ಎಲ್ಲಾ ಷೆರುದಾರರಿಗೆ ಲಾಭಾಂಶ ಹಂಚಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷರಾದ ಮಲ್ಲೇಶಸ್ವಾಮಿ, ನಿರ್ದೇಶಕರುಗಳಾದ ಕುಮಾರ್, ಎಂ.ಶ್ರೀನಿವಾಸ್ ಕೇಶವಮೂರ್ತಿ, ಜಯಂತಿ, ಪ್ರಶಾಂತ್, ಕಾರ್ಯನಿರ್ವಾಹಣಾಧಿಕಾರಿ ಗಾಯತ್ರಿ, ಮಾರಾಟಧಿಕಾರಿ ಮೋಹನ್ ಉಪಸ್ಥಿತರಿದ್ದರು.
Central Government Award for Town Co-operative Society