ರಾಜ್ಯದಲ್ಲಿಯೇ ಉತ್ತಮವಾಗಿ ಜಿಲ್ಲಾ ಸಂಘ ಹೊರಹೊಮ್ಮಿದೆ
ಚಿಕ್ಕಮಗಳೂರು: ಕಂಟ್ರಾಕ್ಟರ್ ವೃತ್ತಿಯಲ್ಲಿ ಸಂಘವು ಅತ್ಯುತ್ತಮವಾಗಿ ತೊಡಗಿಸಿಕೊಂಡಿ ರುವ ಪರಿಣಾಮ ರಾಜ್ಯದಲ್ಲಿಯೇ ಉತ್ತಮ ಸಂಘವಾಗಿ ಹೊರಹೊಮ್ಮಿದೆ ಎಂದು ಜಿಲ್ಲಾ ಕಂಟ್ರಾಕ್ಟರ್ಗಳ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ಹೇಳಿದರು.
ನಗರದ ಕೆ.ಎಂ.ರಸ್ತೆ ಸಮೀಪದ ಜಿಲ್ಲಾ ಕಂಟ್ರಾಕ್ಟರ್ಗಳ ಸಂಘದ ಕಚೇರಿಯಲ್ಲಿ ೧೩ನೇ ವಾರ್ಷಿಕ ಸರ್ವ ಸದಸ್ಯರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಅವರು ಮಾತನಾಡಿದರು.
ಪ್ರಸ್ತುತ ಸಂಘವು ೧೯೪೮ರ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಅಂದಿನಿಂದ ಇಂದಿವರೆಗೆ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರುಗಳ ಸಹಕಾರದಿಂದ ರಾಜ್ಯದಲ್ಲೇ ಉತ್ತಮ ಸಂಘವಾಗಿ ಗುರುತಿಸಿಕೊಂಡಿದ್ದು ಇದೀಗ ಅಧಿಕೃತವಾಗಿ ೧೩ನೇ ವರ್ಷದ ಸಂಭ್ರಮದಲ್ಲಿ ಮುನ್ನಡೆಯುತ್ತಿದೆ ಎಂದರು.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸಂಘವು ೭೫ ವರ್ಷ ಪೂರೈಸುತ್ತಿರುವ ಸವಿನೆನಪಿಗಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದಸ್ಯರುಗಳ ಸಹಕಾರ ಅತ್ಯಂತ ಮುಖ್ಯವಾಗಿದೆ. ಜೊತೆಗೆ ಸಂಘವು ೧.೨೦ ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಪ್ರಾರಂಭಿಸಿದ್ದು ಮುಂದಿನ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಸಂಘವು ವೃದ್ದಾಶ್ರಮ, ಅನಾಥಶ್ರಮಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಮಾಜಿಕ ಚಟುವಟಿಕೆ ಗಳನ್ನು ಹಮ್ಮಿಕೊಂಡಿದೆ. ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿ ವರ್ಷವು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಅತಿಹೆಚ್ಚು ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.
ಸಂಘದ ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ್ ಮಾತನಾಡಿ ಈಗಾಗಲೇ ಸಂಘದಲ್ಲಿ ೮೫ ಸದಸ್ಯರ ಬಲ ವನ್ನು ಹೊಂದಿದೆ. ಅದಲ್ಲದೇ ಸದಸ್ಯರುಗಳಿಗೆ ಸಂಕಷ್ಟ ಅಥವಾ ಅನಾಹುತ ಸಂಭವಿಸಿದ್ದಲ್ಲಿ ತಲಾ ೨೦ ಸಾವಿರ ವಿತರಿಸುತ್ತಿದೆ. ಮುಂದಿನ ದಿನದಲ್ಲಿ ಗ್ರೂಪ್ ಇನ್ಸೂರೆನ್ಸ್ ವ್ಯವಸ್ಥೆ ಕಲ್ಪಿಸಿ ಸಂಘದ ಸದಸ್ಯರುಗಳ ಬೆಳವಣಿಗೆಗೆ ಕಾರ್ಯಪ್ರವೃತ್ತರಾಗುತ್ತಿದೆ ಎಂದರು.
ಇದೇ ವೇಳೆ ಹಿರಿಯ ಗುತ್ತಿಗೆದಾರರಾದ ಎನ್.ಪುರದ ಸಿ.ಹೆಚ್.ವಿ.ಎನ್.ರೆಡ್ಡಿ, ಕಡೂರಿನ ಹಿರೇನಲ್ಲೂರು ಪ್ರಭು, ಚಿಕ್ಕಮಗಳೂರಿನ ಹೆಚ್.ಆರ್.ರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಎ.ನಾಗರಾಜ್, ಖಜಾಂಚಿ ಸಿ.ಎಸ್.ಖಲಂದರ್, ನಿರ್ದೇಶಕರು ಗಳಾದ ಎಂ.ಮಂಜೇಗೌಡ, ವೆಷ್ಲಿಪಿಂಟೋ, ಬಿ.ಎನ್.ಮಂಜುನಾಥ್, ಕೆ.ಎನ್.ದೊಡ್ಡೇಗೌಡ, ಬಿ.ಎಸ್.ಕುಮಾರ ಸ್ವಾಮಿ, ಜಿ.ಎಂ.ಪ್ರಕಾಶ್, ಬಿ.ಎಸ್.ಓಂಕಾರ್, ಟಿ.ಎಂ.ನಾಸೀರ್, ಎಂ.ಎ.ರವಿಕುಮಾರ್, ಎ.ಟಿ.ಅನೂಪ್ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
13th Annual All Members General Meeting at District Contractors Association Office