September 16, 2024

ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಸಚಿವ ಶಿವಾನಂದ ಪಾಟೀಲ್ ವಜಾಕ್ಕೆ ಆಗ್ರಹ

0
ರಾಜ್ಯ ರೈತ ಸಂಘ ಸಚಿವ ಶಿವಾನಂದ್ ಪಾಟೀಲ್ ರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ ರೈತ ಸಂಘ ಸಚಿವ ಶಿವಾನಂದ್ ಪಾಟೀಲ್ ರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯದ ರೈತರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಾಜ್ಯದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷರು ಸಹಿತ ಮುಖಂಡರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮುಂತಾದವರ ನೇತೃತ್ವದಲ್ಲಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರೈತರನ್ನು ಅವಮಾನಿಸಿರುವ ಸಚಿವರನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದರು.

ಬರಗಾಲ ಮತ್ತಿತರ ಕಾರಣಗಳಿಂದ ಆಹಾರ ಬೆಳೆಗಳಾವು ಕೈಗೆ ಸಿಗುತ್ತಿಲ್ಲ, ವಾಣಿಜ್ಯ ಬೆಳೆಗಳಿಂದಲೂ ಲಾಭ ಬರುತ್ತಿಲ್ಲ. ಮೇವು ಇಲ್ಲದೆ ಅತ್ಯಂತ ಕ?ದಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ದೇಶದ ಸುಮಾರು ೭೦ರ? ಜನರಿಗೆ ಉದ್ಯೋಗ ಸೃಷ್ಠಿಮಾಡಿಕೊಡುತ್ತಾರೆ. ಇಂತಹ ರೈತರ ಬಗ್ಗೆ ನಾವು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ನಾಲಿಗೆ ಹರಿಬಿಟ್ಟಿರುವ ಶಿವಾನಂದ ಪಾಟೀಲರ ವರ್ತನೆ ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಬದಲು ಈ ರೀತಿ ಅವಹೇಳನ ಮಾಡಿರುವುದನ್ನು ರೈತ ಸಂಘ ಸಹಿಸುವುದಿಲ್ಲ. ಇಂತಹ ಸಚಿವರನ್ನು ವಜಾಗೊಳಿಸದಿದ್ದರೆ ಇನ್ನೂ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ಕೆ.ಕೆ ಕೃ?ಗೌಡ, ಬಸವರಾಜ್, ಚಂದ್ರಶೇಖರ್ ಮತ್ತಿತರರಿದ್ದರು.

Protest demanding dismissal of State Farmers Union Minister Shivanand Patil from the Cabinet

About Author

Leave a Reply

Your email address will not be published. Required fields are marked *