ಜಿಲ್ಲಾ ವಾಹನ ಮಾಲೀಕರ ಬಳಕೆದಾರರ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಪಿ.ರಾಜೇಂದ್ರ ಅವಿರೋಧವಾಗಿ ಆಯ್ಕೆ
ಚಿಕ್ಕಮಗಳೂರು: ಜಿಲ್ಲಾ ವಾಹನ ಮಾಲೀಕರ ಬಳಕೆದಾರರ ವಿವಿದ್ದೋದ್ದೇಶ ಸಹಕಾರ ಸಂಘದ ಚುನಾವಣೆ ಬುಧವಾರ ಮಲ್ಲಂದೂರು ರಸ್ತೆಯ ಸಂಘದ ಕಛೇರಿಯಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಕೆ.ಪಿ.ರಾಜೇಂದ್ರ ಉಪಧ್ಯಕ್ಷರಾಗಿ ನಿಸ್ಸಾರ್ಅಹ್ಮದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಗುರುಮೂರ್ತಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ನಂತರ ಕೆ.ಪಿ.ರಾಜೇಂದ್ರ ಮಾತನಾಡಿ, ೨೦-೨೫ ವರ್ಷದ ಸಂಘವನ್ನು ಮುನ್ನಡೆಸಲು ಸಂಸ್ಥೆಯ ಚುಕ್ಕಾಣಿಯನ್ನು ನನಗೆ ವಹಿಸಿದ್ದಕ್ಕೆ ಸದಸ್ಯರಿಗೆ ಅಭಿನಂದಿಸುತ್ತೇನೆ. ಸಂಸ್ಥೆಗೆ, ಸದಸ್ಯರಿಗೆ ಯಾವುದೇ ಲೋಪವಾಗದಂತೆ ನಮ್ಮ ಎಲ್ಲ ನಿರ್ದೇಶಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂಸ್ಥೆಗೆ ಇಂದು ನಿವೇಶನದ ಅಗತ್ಯವಿದೆ. ಸಂಸ್ಥೆಯ ಎಲ್ಲ ಷೇರುದಾರರನ್ನು ಒಟ್ಟುಗೂಡಿಸಿ ಈ ಬಗ್ಗೆ ಚರ್ಚಿಸಬೇಕಿದೆ ಎಂದು ತಿಳಿಸಿದರು.
ಎಲ್ಲರೂ ಸೇರಿ ಶ್ರಮ ಹಾಕಿದರೆ ಮಾತ್ರ ಈ ಸಂಸ್ಥೆಗೆ ಹೆಸರು ತರಬಹುದಾಗಿದೆ. ಎಲ್ಲರಿಗೂ ಷೇರು ಪ್ರಮಾಣಪತ್ರ ನೀಡುವ ಪ್ರಯತ್ನ ಮಾಡುತ್ತೇನೆ. ಸಂಸ್ಥೆ ಇನ್ನೂ ಮುಳುಗಿಹೋಗಿಲ್ಲ ಗಟ್ಟಿಯಾಗಿದೆ ಎಂದು ಎಲ್ಲ ಸದಸ್ಯರನ್ನು ಕರೆದು ಮನವರಿಕೆ ಮಾಡಿಕೊಡಲಾಗುವುದು. ನನ್ನಿಂದ ಏನಾದರೂ ತಪ್ಪಾದಲ್ಲಿ ನನಗೆ ತಿಳಿಹೇಳಬಹುದು ಎಂದರು.
ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಸುಮಾರು ೧೫ ವರ್ಷ ನಿರ್ದೇಶಕನಾಗಿ, ೧೦ ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಗೆ ಉತ್ತಮ ಪೆಟ್ರೋಲ್ ಬಂಕ್ಆಗಿ ನಡೆದುಬಂದಿದೆ. ನನ್ನ ಅವಧಿಯಲ್ಲಿ ಸಣ್ಣ ಲೋಪ ಅಥವಾ ಯಾವುದೇ ತೊಂದರೆಯಾಗಿಲ್ಲ. ಸಂಘ ೪೦ ಲಕ್ಷ ರೂ. ಲಾಭದಲ್ಲಿದೆ. ಎಲ್ಲರಿಗೂ ಅವಕಾಶ ಆಗಲಿ ಎಂದು ಒಮ್ಮತದಿಂದ ಕೆ.ಪಿ ರಾಜೇಂದ್ರ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ನಿಸ್ಸಾರ್ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಕಟ್ಟಡ ಲೀಸ್ ಇರುವ ಜಾಗ, ಅದು ಪೂರ್ಣಗೊಂಡ ಮೇಲೆ ಸ್ವಂತ ಜಾಗವನ್ನು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಎಂ.ವಿ.ಷಡಾಕ್ಷರಿ, ಸಿ.ಟಿ.ಕೇಶವಮೂರ್ತಿ, ಕೆ.ಕೃಷ್ಣ, ಸಿ.ಎಂ.ಜಮೀಲ್ ಅಹಮದ್, ಮಹಮ್ಮದ್ ಫೈಜುಲ್ಲಾ, ಬಿ.ಆರ್.ಲೋಕೇಶ್ ಹೆಚ್.ಆರ್, ಷಣ್ಮುಖ, ಕೆ.ಯು ರತೀಶ್ ಕುಮಾರ್, ಟಿ.ಎಂ.ಮಲ್ಲೇಶ್ಗೌಡ, ಬಿ.ಎಸ್ ಪ್ರಶಾಂತ್, ಹೆಚ್.ಸಿ.ತ್ರಿವೇಣಿ ಉಪಸ್ಥಿತರಿದ್ದರು.
District Vehicle Owners Users Multi Purpose Cooperative Society