September 16, 2024

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿಗೆ ಮನವಿ

0
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿಗೆ ಮನವಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿಗೆ ಮನವಿ

ಚಿಕ್ಕಮಗಳೂರು: ತಾಲೂಕಿನ ಕೂದುವಳ್ಳಿ ಸಹಕಾರ ಸಂಘದ ಚುನಾವಣೆಗೂ ಮುನ್ನ ಅರ್ಹ ಎಲ್ಲ ಮತದಾರರ ಪಟ್ಟಿ ಪ್ರಟಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌ಅವರಿಗೆ ಮನವಿ ನೀಡಿದರು.

ಮನವಿ ನೀಡಿ ದಸಂಸ ರಾಜ್ಯ ಸಮಿತಿ ಸಂಚಾಲಕ ಕೆ.ಸಿ.ವಸಂತಕುಮಾರ್ ಮಾತನಾಡಿ ತಾಲೂಕಿನ ಕೂದುವಳ್ಳಿ ಪ್ರಾಥಮಿಕ ಸಹಕಾರ ಸಂಘದ ಚುನಾವಣೆ ಜ.೨೮ ರಂದು ನಡೆಯಲಿದೆ. ಸಂಘದ ಸದಸ್ಯರಲ್ಲಿ ನೂರಾರು ಮಂದಿ ವಾರ್ಷಿಕ ಸಭೆಗೆ ಗೈರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.

ಆದರೆ, ಚುನಾವಣೆಗೆ ಸ್ಪರ್ದಿಸಿರುವ ಕೆಲವು ಬಲಾಢ್ಯ ಅಭ್ಯರ್ಥಿಗಳು ತಮಗೆ ಬೇಕಾದವರನ್ನು ಪಟ್ಟಿ ಮಾಡಿ ಹೈಕೋರ್ಟಿಗೆ ಹೋಗಿ ಮತ ಚಲಾಯಿಸುವ ಅವಕಾಶ ಮಾಡಿಕೊಂಡು ಬಂದಿದ್ದಾರೆ.ಆದರೆ, ಈ ಪಟ್ಟಿಯನ್ನು ಸಂಘದ ಕಾರ್ಯದರ್ಶಿ ಅಥವಾ ಚುನಾವಣಾಕಾರಿಗೆ ತಲುಪಿಸಿಲ್ಲ. ಇಂತಹ ೨೦೦ ಕ್ಕೂ ಹೆಚ್ಚು ಮತದಾರರ ಹಸರನ್ನು ಗೌಪ್ಯವಾಗಿಟ್ಟುಕೊಂಡು ತಮಗೆ ಬೇಕಾದವರಿಗೆ ಮತ ಹಾಕಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ. ಇದಕ್ಕೆ ಡಿಆರ್ ಕಚೇರಿಯ ಸಹಕಾರ ಇದ್ದಂತಿದೆ. ಹೀಗಾಗಿ ಕೂಡಲೇ ಎಲ್ಲ ಅರ್ಹ ಮತದಾರರ ಪಟ್ಟಿ ಪ್ರಟಿಸುವಂತೆ ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎಂ.ಸಿ.ಜಯರಾಮಯ್ಯ, ದೊಡ್ಡಯ್ಯ, ಕೆಂಚಪ್ಪ, ಇಲಿಯಾಸ್ ಅಹ್ಮದ್, ಯಶೋದರ ಉಪಸ್ಥಿತರಿದ್ದರು.

Appeal to Karnataka Dalit Sangharsh Committee District Incharge

About Author

Leave a Reply

Your email address will not be published. Required fields are marked *