September 16, 2024

ನಿರಂತರ ಪ್ರಯತ್ನದಿಂದ ಸರ್ವಶ್ರೇಷ್ಟ ನೃತ್ಯಗಾರರಾಗಿ

0
ದಿ ಸ್ಟ್ರೇಂಜರ್‍ಸ್ ಡ್ಯಾನ್ಸ್ ಎಂಟಟ್ರೈನರ್ಸ್‌ನಿಂದ ಏರ್ಪಡಿಸಿದ್ದ ಲೆಟ್ಸ್ ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ದಿ ಸ್ಟ್ರೇಂಜರ್‍ಸ್ ಡ್ಯಾನ್ಸ್ ಎಂಟಟ್ರೈನರ್ಸ್‌ನಿಂದ ಏರ್ಪಡಿಸಿದ್ದ ಲೆಟ್ಸ್ ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಚಿಕ್ಕಮಗಳೂರು:  ನೃತ್ಯ ಕಲೆಯು ಇಂದಿನ ಯುವಪೀಳಿಗೆಗೆ ಅತ್ಯಂತ ಆಸಕ್ತಿದಾಯಕವಾಗಿದೆ, ನಿರಂತರ ಪ್ರಯತ್ನದಿಂದ ಹುದುಗಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಅನಾವರಣಗೊಳಿಸಿ ಸರ್ವಶ್ರೇಷ್ಟ ನೃತ್ಯಗಾರ ರಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|| ಅಂಶುಮಂತ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ದಿ ಸ್ಟ್ರೇಂಜರ್‍ಸ್ ಡ್ಯಾನ್ಸ್ ಎಂಟಟ್ರೈನರ್ಸ್‌ನಿಂದ ಏರ್ಪಡಿಸಿದ್ದ ಲೆಟ್ಸ್ ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಪ್ರತಿಮಾ ನೃತ್ಯಗಾರರಾದ ಮೈಕಲ್ ಜಾಕ್ಸನ್ ಮತ್ತು ಪ್ರಭುದೇವರಂತಹ ಅನೇಕ ಮಂದಿ ಸತತ ಪ್ರಯ ತ್ನದಿಂದ ಇಡೀ ವಿಶ್ವವೇ ಅವರತ್ತ ತಿರುಗುವಂತೆ ಮಾಡಿದೆ. ವಿವಿಧ ಶೈಲಿಯಲ್ಲಿ ನೃತ್ಯವೆಸಗುವ ಮಹಾನ್ ಕಲಾವಿ ದರಿಗೆ ಅತ್ಯಧಿಕ ಅಭಿಮಾನಿಗಳ ಬಳಗವಿದ್ದು ಮೈನವೀರೇಳಿಸುವಂತಹ ನೃತ್ಯದ ಕಲೆ ಅವರಲ್ಲಿ ಅಡಗಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಪಾಲಕರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡಿದರೆ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದ ಅವರು ಹಿಂದಿನ ಕಾಲಘಟ್ಟದಿಂದಲೂ ನೃತ್ಯದ ಪರಂ ಪರೆಯನ್ನು ಆಚರಿಸಲಾಗುತ್ತಿದ್ದು ಇಂದಿನ ಯುವಪೀಳಿಗೆಗೆ ವಿಭಿನ್ನ ಶೈಲಿಯಲ್ಲಿ ನೃತ್ಯವೆಸಗಿ ಸಭಿಕರನ್ನು ರಂಜಿಸುತ್ತಿ ರುವುದು ಖುಷಿಯ ಸಂಗತಿ ಎಂದರು.

ದಿ ಸ್ಟ್ರೇಂಜರ್ ತಂಡವು ಜಿಲ್ಲೆಯಲ್ಲಿ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಬಡ ಮಕ್ಕಳಿಗೆ ತರಬೇತಿ ನೀ ಡಿ ಜೀವನಕ್ಕೆ ದಾರಿಮಾಡಿ ಕೊಟ್ಟಿರುವುದು ಒಳ್ಳೆಯ ವಿಷಯ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಕ್ಕಳಿಗೆ ಗುಣ ಮಟ್ಟದ ತರಬೇತಿ ನೀಡಿ ಮುನ್ನೆಡೆಯಬೇಕು. ಜೊತೆಗೆ ಸ್ಪರ್ಧೆಯಲ್ಲಿ ಸೋಲುಂಡವರು ದೃತಿಗೆಡದೇ ನಿರಂತರ ಪ್ರಯತ್ನದಲ್ಲಿ ತೊಡಗಬೇಕು ಎಂದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಮದ್ಯಮ ಹಾಗೂ ಬಡ ಮಕ್ಕಳಿಗೆ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗದಿದ್ದ ಸಮಯದಲ್ಲಿ ದಿ ಸ್ಟ್ರೇಜರ್‍ಸ್ ತಂಡವು ಬೆನ್ನುಲುಬಾಗಿ ನಿಂತು ನೃತ್ಯ ಕಲೆಯ ನ್ನು ಧಾರೆ ಎರೆಯುವ ಮೂಲಕ ಮಕ್ಕಳನ್ನು ಸಮಾಜದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದರದೇಯಾದ ನೃತ್ಯ ಶೈಲಿಗಳಿವೆ. ಕರಾವಳಿ ಭಾಗದಲ್ಲಿ ಯಕ್ಷಗಾನ, ಬಯಲು ಸೀಮೆಯಲ್ಲಿ ವೀರಗಾಸೆ ಸೇರಿದಂತೆ ಆಯಾವಾರು ವಿಭಿನ್ನ ನೃತ್ಯ ಬಂಗಿಗಳಿವೆ. ಇವುಗಳನ್ನು ವೀಕ್ಷಿಸುವ ಪ್ರೇಕ್ಷಕರು ಹಾಗೂ ನೃತ್ಯದಲ್ಲಿ ತೊಡಗುವವರಿಗೆ ಹೊಸಚೈತನ್ಯ ಮೂಡಲಿದೆ ಎಂದು ತಿಳಿಸಿದರು.

ದಿ ಸ್ಟ್ರೇಂಜರ್‍ಸ್ ಡ್ಯಾನ್ಸ್ ಎಂಟಟ್ರೈನರ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಸಾದ್ ಅಮೀನ್ ಮಾತನಾಡಿ ಇಲ್ಲಿನ ಡ್ಯಾನ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಂತಹ ಹಲವಾರು ಮಂದಿ ಸಿನಿಮಾ, ಧಾರವಾಹಿ ಹಾಗೂ ಕ್ಯಾಮರಾ ಗಳಾಗಿ ಕೆಲಸ ನಿರ್ವಹಿಸುತ್ತಿದ್ದು ಬಹುತೇಕ ಚಲನಚಿತ್ರ ರಂಗದಲ್ಲೇ ಹೆಚ್ಚು ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿ ದ್ದಾರೆ ಎಂದರು.

ಪ್ರಸ್ತುತ ನೃತ್ಯ ಸ್ಪರ್ಧೆಯಲ್ಲಿ ಸುಮಾರು ೬೦ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದು ತುಮಕೂರು, ರಾಮ ನಗರ, ಬೆಂಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾ ಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ|| ಡಿ. ಎಲ್.ವಿಜಯ್‌ಕುಮಾರ್, ನಗರಾಧ್ಯಕ್ಷ ತನೋಜ್‌ನಾಯ್ಡು, ಮುಖಂಡ ವೆಂಕಟೇಶ್ ನಾಯ್ಡು, ಕಾಂಗ್ರೆಸ್ ಪದವಿದರ ಘಟಕದ ಅಧ್ಯಕ್ಷ ಜಿ.ಬಿ.ಪವನ್, ಜಿಲ್ಲಾ ಒಕ್ಕಲಿಗರ ಸಂ ಘದ ಅಧ್ಯಕ್ಷ ಟಿ.ರಾಜಶೇಖರ್, ಉದ್ಯಮಿ ಸುರೇಂದ್ರಶೆಟ್ಟಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಸೇವಾಕಾಂಕ್ಷಿ ನಂಜೇಶ್ ಬೆಣ್ಣೂರು ಮತ್ತಿತರರು ಹಾಜರಿದ್ದರು.

Let’s Dance State Level Dance Competition organized by The Strangers Dance Entrainers

About Author

Leave a Reply

Your email address will not be published. Required fields are marked *