ತರೀಕೆರೆ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ ನಿಧನ
ತರೀಕೆರೆ: ತರೀಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ (೬೧) ನಿಧನರಾಗಿದ್ದಾರೆ.
ಅವರು ಬೆಂಗಳೂರಿನ ಜೆ.ಪಿ.ನಗರದ ಅಸ್ತರ್ ಆರ್.ವಿ. ಹಾಸ್ಪೆಟಲ್.ನಲ್ಲಿ ಭಾನುವಾರ ಬೆಳಿಗ್ಗೆ ೯-೧೫ರ ಸಮಯದಲ್ಲಿ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಓರ್ವ ಪುತ್ರಿ, ಆಪಾರ ಬಂಧುವರ್ಗ ಅಗಲಿದ್ದಾರೆ.
ಪರಿಚಯ: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಆವರ ಅಪ್ತವಲಯದಲ್ಲಿದ್ದು ೨೦೦೪ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ವಿಜಯ ಸಾಧಿಸಿದ್ದರು.
ಶ್ರೀ ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷರಾಗಿ ಶ್ರೀ ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರ ನಿರ್ಮಿಸುವ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಸಮುದಾಯ ಭವನದ ಉಪಯೋಗ ಆಗುವಂತೆ ಶ್ರಮ ವಹಿಸಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮಾರ್ಜ್ ೧೧ ರಂದು ಸೋಮವಾರ ಬೆಳಿಗ್ಗೆ ೭ ಗಂಟೆಯಿಂದ ಮದ್ಯಾನ್ಹ ೧ ಗಂಟೆಯವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತ್ಯ ದರ್ಶನಕ್ಕೆ ವ್ಯವಸ್ಥೆಯಾಗಿದ್ದು ಮದ್ಯಾನ್ಹ ಅಂತ್ಯ ಸಂಸ್ಕಾರ ನೆಡೆಯಲಿದೆ ಎಂದು ಮಾಜಿ ಪುರಸಭಾಧ್ಯಕ್ಷ ಡಿ.ವಿ.ಪದ್ಮರಾಜ್ ಮತ್ತು ಟಿ.ಎಸ್.ರಮೇಶ್ ತಿಳಿಸಿದ್ದಾರೆ.
Former Tarikere MLA TH Sivashankarappa passed away