20ನೇ ವರ್ಷದ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದ ವಾರ್ಷಿಕೋತ್ಸವ
ಚಿಕ್ಕಮಗಳೂರು : ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ೨೦ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆಯನ್ನು ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಿ ಬೆಳಗ್ಗೆ ಸಂಘದ ನಿರ್ದೇಶಕರಾದ ಗಿರಿಜಾಚಂದ್ರಪ್ಪ ಮತ್ತು ಕೋಮಲಾರವಿಕುಮಾರ್ ದಂಪತಿಗಳು ಗಣಪತಿ ಹೋಮ, ಸುದರ್ಶನ ಹೋಮವನ್ನು ಲೋಕ ಕಲ್ಯಾಣಕ್ಕಾಗಿ ನೆರೆವೇರಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು
ಜಿಲ್ಲಾ ಒಕ್ಕಲಿಗರ ಸಂಘದ ಟಿ.ರಾಜಶೇಖರ್ ಮಾತನಾಡಿ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನವನ್ನು ಉದ್ಘಾಟಿಸಿ ಇಂದಿಗೆ ೨೦ ವರ್ಷ ಪೂರ್ಣಗೊಂಡಿದೆ ಅದರ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದ ಹೋಮ-ಅವನ, ವಿಶೇಷ ಪೂಜೆಗಳನ್ನು ನೆರೆವೇರಿಸಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಎನ್.ಲಕ್ಷ್ಮಣಗೌಡ, ನಿರ್ದೇಶಕರಾದ ಕೆ.ಕೆ.ಮನುಕುಮಾರ್, ರವಿಕುಮಾರ್, ಕೆ.ಕೆ.ವೆಂಕಟೇಶ್, ಮೋಹನ್ಕುಮಾರ್, ಮಧು, ಮಹಿಳಾ ಸಂಘದ ನಿರ್ದೇಶಕರಾದ ಕೋಮಲಾರವಿಕುಮಾರ್, ವ್ಯವಸ್ಥಾಪಕ ರಾಜು, ಉಪಸ್ಥಿತರಿದ್ದರು.
20th Anniversary of Sri Lakshmi Venkateswara Temple with Sridevi Bhudevi