September 19, 2024
ಡಾ. ಬಾಬು ಜಗಜೀವನ್ ರವರ ೧೧೭ನೇ ಜನ್ಮದಿನಾಚರಣೆ

ಡಾ. ಬಾಬು ಜಗಜೀವನ್ ರವರ ೧೧೭ನೇ ಜನ್ಮದಿನಾಚರಣೆ

ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಬಾಬು ಜಗಜೀವನ್‌ರಾಮ್ ದೀನ ದಲಿತರ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಾ. ಬಾಬು ಜಗಜೀವನ್ ರವರ ೧೧೭ನೇ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸುವ ಮೂಲಕ ನಾಗರಿಕರಿಗೆ ಶುಭಾಶಯಗಳು ಕೋರಿದರು.

ದೀನದಲಿತರ ಹಕ್ಕುಗಳಿಗಾಗಿ ಬಹಳ ಹೋರಾಟ ಮಾಡಿದ ಸರಳ ಸಜ್ಜನ ವ್ಯಕ್ತಿಯಾಗಿದ್ದ ಡಾ. ಬಾಬು ಜಗಜೀವನ್‌ರಾಮ್ ಜನ್ಮದಿನಾಚರಣೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಚುನಾವಣೆ ಪ್ರಚಾರ ಐಕಾನ್‌ಗಳಾಗಿ ಹಿರೇಮಗಳೂರು ಕಣ್ಣನ್, ರಕ್ಷಿತರಾಜು ಸೇರಿ ಮತ್ತಿಬ್ಬರ ಆಯ್ಕೆ ಮಾಡಿದ ಸಮಾಜ ಎಲ್ಲಾ ಸ್ಥರದ ಜನರು ಮತದಾನ ಮಾಡಲು ಜಾಗೃತಿ ಮೂಡಿಸಲು ಉದ್ದೇಶ ಹೊಂದಿದ್ದು, ನಗರದಲ್ಲಿ ಶೇಕಡ ೮೦ % ಮತದಾನವಾಗಬೇಕೆಂದು ಗುರಿ ಹೊಂದಲಾಗಿದೆ ಎಂದರು.

ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸ್ವೀಟ್ ಮತದಾನ ಜಾಗೃತಿ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮವನ್ನು ಬಹಳ ಪರಿಣಾಮಕಾರಿಯಾಗಿ ಮಾಡಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೋಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Dr. 117th Birth Anniversary of Babu Jagjivan

About Author

Leave a Reply

Your email address will not be published. Required fields are marked *

You may have missed