September 8, 2024

ಬೋಜೇಗೌಡರ ಅವಕಾಶವಾದಿತನಕ್ಕೆ ಶಿಕ್ಷಕರು ತಕ್ಕಉತ್ತರ ನೀಡಲಿದ್ದಾರೆ

0
ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್

ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್

ಚಿಕ್ಕಮಗಳೂರು: ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನೇ ನಿರ್ನಾಮ ಮಾಡಿರುವ ಎಸ್.ಎಲ್.ಬೊಜೇಗೌಡ ಅವರ ಅವಕಾಶವಾದಿತನಕ್ಕೆ ಈ ಬಾರಿ ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ರಾಜಕಾರಣದಲ್ಲಿ ಎದುರಾಳಿಗಳ್ನು ಹಣಿಯಲು ತಂತ್ರಗಾರಿಕೆ ರೂಪಿಸುವುದು ಸರ್ವೇ ಸಾಮಾನ್ಯ. ಆದರೆ ಅಧಿಕಾರಕ್ಕಾಗಿ ಸದಾ ಕುತಂತ್ರ ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡರೆ ಶಾಶ್ವತವಾಗಿ ಯಶಸ್ಸು ಸಿಗುವುದಿಲ್ಲ ಎನ್ನುವುದು ಈ ಬಾರಿ ಬೋಜೇಗೌಡರ ಅರಿವಿಗೆ ಬರಲಿದೆ ಎಂದಿದ್ದಾರೆ.

ಸ್ವಾರ್ಥಕ್ಕಾಗಿ ನಂಬಿದವರನ್ನೇ ರಾಜಕೀಯವಾಗಿ ಮುಗಿಸುವ ಬೊಜೇಗೌಡರ ಕುತಂತ್ರದಿಂದಾಗಿ ಜಿಲ್ಲೆಯಲ್ಲಿ ಹಲವು ಮುಖಂಡರು ಹಣವನ್ನೂ ಕಳೆದುಕೊಂಡು ತೊಂದರೆಗೆ ಸಿಕ್ಕಿದ್ದಾರೆ. ಇನ್ನೂ ಕೆಲವು ರಾಜಕಾರಣಿಗಳು ಸೋಲನುಭವಿಸಿ ರಾಜಕೀಯದಿಂದ ವಿಮುಖರಾಗಿದ್ದಾರೆ ಎಂದು ದೂರಿದ್ದಾರೆ.

ಮಾಜಿ ಶಾಸಕ ವೈಎಸ್‌ವಿ ದತ್ತ, ಬಿ.ಬಿ.ನಿಂಗಯ್ಯ, ಬಿ.ಎಚ್.ಹರೀಶ್, ಎಂ.ಪಿ.ಕುಮಾರಸ್ವಾಮಿ, ಧನಂಜಯ, ತಿಮ್ಮಶೆಟ್ಟಿ ಇವರೆಲ್ಲರೂ ಬೋಜೇಗೌಡರ ಕುತಂತ್ರಕ್ಕೆ ಬಲಿಯಾಗಿ ನೋವುಂಡವರೇ ಆಗಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಯಾಗಿದ್ದ ಸುಧಾಕರ ಶೆಟ್ಟಿ ಅವರ ವಿರುದ್ಧ ಪ್ರಚಾರ ಮಾಡಿ ಪಕ್ಷವಿರೋಧಿ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರೆಲ್ಲರ ಶಾಪ ಅವರಿಗೆ ತಟ್ಟಲಿದೆ ಎಂದು ಹೇಳಿದ್ದಾರೆ.

ಶಿಕ್ಷಕರ ಕ್ಷೇತ್ರದಿಂದ ಗೆದ್ದು ಶಿಕ್ಷಕರ ಅನುಕೂಲಕ್ಕಾಗಿ ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ಶಿಕ್ಷಕರೂ ಸಹ ಚಿಂತಿಸಬೇಕು. ಸಮಾಜವನ್ನು ತಿದ್ದುವ ಶಿಕ್ಷಕಕರು ಈ ಬಾರಿ ಬೋಜೇಗೌಡರನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಮನವಿ ಮಾಡಿದ್ದಾರೆ.

Teachers will respond to Boje Gowda’s opportunism

 

About Author

Leave a Reply

Your email address will not be published. Required fields are marked *

You may have missed