ವಿಹೆಚ್ಪಿಯಿಂದ ಶಾಂತಿನಗರದಲ್ಲಿ ಪ್ರವಚನ ಕಾರ್ಯಕ್ರಮ
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿ?ತ್ ಧರ್ಮಪ್ರಸಾರ ವಿಭಾಗದ ವತಿಯಿಂದ ನಗರದ ಶಾಂತಿನಗರ ಕಲ್ಲು ದೊಡ್ಡಿಯಲ್ಲಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಈಚೆಗೆ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡು ಗ್ರಾಮದ ಮನೆಗಳಿಗೆ ಭೇಟಿ ನೀಡಿ ಆಶೀ ರ್ವಾದಿಸಿ ಮತಾಂತರ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು.
ಬಳಿಕ ಶ್ರೀ ಗಣಪತಿ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದ ಅವರು ಸಣ್ಣ ಸಣ್ಣ ದೌರ್ಬಲ್ಯವನ್ನು ದೊಡ್ಡದಾಗಿ ತೋರಿಸಿ ಆಸೆ ಆಮಿ? ಒಡ್ಡಿ ಮತಾಂತರ ಕಾರ್ಯ ನಡೆಯುತ್ತಿದೆ ಎಂದ ಅವರು ಸನಾತನಿ ಗಳು ಸಂಸ್ಕಾರಯುಕ್ತವಾಗಿ ಜೀವಿಸುವ ಅನಿವಾರ್ಯತೆ ಜಗತ್ತಿಗಿದೆ ಎಂದರು.
ಜಗತ್ತಿನ ಅನೇಕ ಧರ್ಮ ಗುರುಗಳು ಹೇಳಿರುವಂತೆ ಎಲ್ಲಿಯವರೆಗೂ ಸನಾತನ ಧರ್ಮ ಈ ಭೂ ಮಿಯಲ್ಲಿದೆ ಅಲ್ಲಿವರೆಗೆ ಮಾತ್ರ ಈ ಭೂಮಿಗೆ ಮತ್ತು ಮಾನವ ಸಮಾಜಕ್ಕೆ ಭದ್ರತೆ ಇರುತ್ತದೆ. ಸನಾತನ ಸಂಸ್ಕೃತಿ ನಾಶವಾಗಲು ಆರಂಭವಾದಾಗ ಈ ಜಗತ್ತೇ ನಾಶವಾಗುವ ಸಾಧ್ಯತೆ ಹೆಚ್ಚು ಎಂದರು.
ಅನೇಕ ಕಡೆಗಳಲ್ಲಿ ಸನಾತನತೆ ನಾಶ ಹೊಂದಿವೆ. ಆ ಸ್ಥಳಗಳಲ್ಲಿ ಪ್ರಾಣಿಗಳಿಗಿಂತ ಕೀಳಾಗಿ ಮನು?ರು ನಡೆದುಕೊಳ್ಳುತ್ತಿದೆ. ಸನಾತನ ಧರ್ಮವನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದ್ದು ಮಕ್ಕಳು, ಯು ವಕ-ಯುವತಿಯರು ಸೂಕ್ತ ರೀತಿಯ ಸಂಸ್ಕಾರವನ್ನು ಕಲಿಸುವ ಮತ್ತು ಅಭ್ಯಾಸ ಮಾಡುವಂತಾಗಬೇಕು ಎಂದರು.
ನಮ್ಮ ಸಂಸ್ಕೃತಿ ನಮ್ಮ ಧರ್ಮ ಉಳಿದರೆ ಜಗತ್ತೇ ಉಳಿಯಲಿದೆ. ಎಂದಿಗೂ ಆಸೆ-ಆಮಿಷಗಳಿಗೆ ಬಲಿಯಾಗದೇ ಸನಾತಧರ್ಮ ಉಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ರಾಜು, ಆಟೋಶಿವಣ್ಣ, ಮಣಿಕಂಠ ಮತ್ತಿ ತರರು ಹಾಜರಿದ್ದರು.
Discourse program in Shantinagar by VHP