September 16, 2024

ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶಾಸಕ ಎಚ್ ಡಿ ತಮ್ಮಯ್ಯ ಭೇಟಿ

0
ತಾಲ್ಲೂಕಿನ ಕಳವಾಸೆ, ಶಿರವಾಸೆ, ಹಡ್ಲಗದ್ದೆ, ಸುಗುಡುವಾಣಿ ಹಾಗೂ ಗಾಳಿಗುಡ್ಡೆ ಗ್ರಾಮಗಳಿಗೆ ಶಾಸಕ ಎಚ್ ಡಿ ತಮ್ಮಯ್ಯ ಭೇಟಿ

ತಾಲ್ಲೂಕಿನ ಕಳವಾಸೆ, ಶಿರವಾಸೆ, ಹಡ್ಲಗದ್ದೆ, ಸುಗುಡುವಾಣಿ ಹಾಗೂ ಗಾಳಿಗುಡ್ಡೆ ಗ್ರಾಮಗಳಿಗೆ ಶಾಸಕ ಎಚ್ ಡಿ ತಮ್ಮಯ್ಯ ಭೇಟಿ

ಚಿಕ್ಕಮಗಳೂರು:  ಅಪಾರ ಮಳೆಯಿಂದಾಗಿ ಗುಡ್ಡ ಕುಸಿಯುವ ಹಂತದಲ್ಲಿರುವ ನಿವಾಸಿ ಗಳಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು. ಮಾರ್ಗಮಧ್ಯೆ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕಳವಾಸೆ, ಶಿರವಾಸೆ, ಹಡ್ಲಗದ್ದೆ, ಸುಗುಡುವಾಣಿ ಹಾಗೂ ಗಾಳಿಗುಡ್ಡೆ ಗ್ರಾಮಗಳ ಮೂಲ ಭೂತ ಸೌಕರ್ಯಗಳಿಂದ ಹಾನಿಗೊಂಡ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳ ವೃಂದದೊಂದಿಗೆ ಭೇಟಿ ನೀಡುವ ಮೂಲಕ ಮೂಲಸೌಲಭ್ಯ ಒದಗಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಶಿರವಾಸೆ ಸಮೀಪದ ಹಡ್ಲಗದ್ದೆ ಸಮೀಪ ಗಿರಿಶ್ರೇಣಿಯ ಗುಡ್ಡ ಕುಸಿಯುವ ಹಂತದಲ್ಲಿರುವ ಹಿನ್ನೆಲೆ ಅನೇಕ ಕುಟುಂಬಗಳು ಜೀವಭಯದಿಂದ ಕಾಲಕಳೆಯುವಂತಾಗಿದೆ. ಹೀಗಾಗಿ ಬೇರೆಡೆ ಇಡೀ ಗ್ರಾಮವನ್ನು ಸ್ಥಳಾಂತರಿಸಲು ಮುಂದಾಗಿ ಭದ್ರತೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಒಂದೂವರೆ ದಶಕಗಳ ಹಿಂದೆ ಬಿದ್ದಿದ್ದ ಮಳೆ ಇದೀಗ ಬಂದಿರುವ ಕಾರಣ ಗ್ರಾಮಸ್ಥರು ಆತಂಕಕ್ಕೆ ಒಳಗಾಗದಿರಿ, ನಿವಾಸಿಗಳ ಒಪ್ಪಿಗೆಯಂತೆ ಸದ್ಯದಲ್ಲೇ ಜಾಗ ಗುರುತಿಸಿ ವ್ಯವ ಸ್ಥೆ ಕಲ್ಪಿಸುವ ಭರವಸೆ ನೀಡಿ, ಸ್ಥಳದಲ್ಲಿದ್ದ ಸ್ಥಳೀಯ ಅರಣ್ಯಾಧಿಕಾರಿ ಹಾಗೂ ತಾ.ಪಂ. ಇಓಗೆ ಜಾಗದ ವ್ಯವ ಸ್ಥೆಗೆ ಮುಂದಾಗಬೇಕು ಎಂದು ಸೂಚಿಸಿದರು.

ಶಿರವಾಸೆ ಮಾರ್ಗಮಧ್ಯೆ ರಸ್ತೆ ಕುಸಿದಿದೆ ಹಾಗೂ ಅಲ್ಲಲ್ಲಿ ಬೃಹದಾಕಾರದ ಮರಗಳು ಉರುಳಿರುವ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೇ ವಿದ್ಯುತ್ ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದಿ ರುವ ಕಾರಣ ವಾರಗಟ್ಟಲೇ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಇದಕ್ಕೆ ಪ್ರತಿಯಿಸಿದ ಶಾಸಕರು ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಮುಂದಾಗಿದೆ. ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯ ದಲ್ಲಿ ಮೆಸ್ಕಾಂ ನಿರತವಾಗಿದೆ ಎಂದು ಹೇಳಿದರು.

ಕಳೆದ ಅನೇಕ ದಿನಗಳಿಂದ ಸುರಿದಿರುವ ಧಾರಾಕಾರ ಮಳೆಗೆ ಶಿರವಾಸೆ ವ್ಯಾಪ್ತಿ ಅನೇಕ ಮನೆಗಳು ಕುಸಿತಗೊಂಡಿದೆ. ಅಂಥ ನಿವಾಸಿಗಳಿಗೆ ಸ್ಥಳೀಯವಾಗಿ ಆಶ್ರಯ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸಂಪೂರ್ಣ ಮನೆ ಕಳೆದುಕೊಂಡ ಅಜ್ಜಯ್ಯ ಸೇರಿದಂತೆ ಇಬ್ಬರಿಗೆ ತಲಾ ೧.೨೦ ಲಕ್ಷ ರೂ. ಖಾತೆಗೆ ಜಮಾ ವಣೆಗೊಂಡ ಪತ್ರವನ್ನು ವಿತರಿಸಿದರು.

ಈ ಭಾರಿ ಅಪಾರ ಮಳೆಯಿಂದ ಶಿರವಾಸೆ ಸುತ್ತಮುತ್ತಲು ೫೦ ಲಕ್ಷ ರೂ. ಮೌಲ್ಯದ ಆಸ್ತಿ ಹಾನಿ ಗೊಂಡಿದೆ ಎಂದು ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಅಧಿಕಾರಿಗಳು ಅಂದಾಜಿದ್ದು ಸರ್ಕಾರ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿದರೆ ಹೆಚ್ಚಿನ ಮಟ್ಟದಲ್ಲಿ ಪರಿಹಾರವನ್ನು ನೀಡಲಾ ಗುವುದು ಎಂದು ಭರವಸೆ ನೀಡಿದರು.

ಬಳಿಕ ಶಿರವಾಸೆ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಗ್ರಾಮಸ್ಥರ ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಅಹವಾಲು ಪಡೆದುಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿ ಮುಂದಿನ ಬಗರ್‌ಹುಕುಂ ಸಭೆಯೊಳಗೆ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನಿವೇಶನರಹಿತರಿಗೆ ಹಕ್ಕುಪತ್ರ ವಿತರಿಸ ಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಾರಾನಾಥ್, ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷೆ ರಾಧಮ್ಮ, ಸದಸ್ಯರುಗಳಾದ ರವಿ, ಗಣೇಶ್, ವಿಮಲ, ತಾಲ್ಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್‌ಬೆಟ್ಟಗೆರೆ, ಬಗರ್‌ಹುಕುಂ ಸಮಿತಿ ಸದಸ್ಯ ಕೆಂಗೇಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲ್ಲೂಕು ಸದಸ್ಯ ನರೇಂದ್ರಗೌಡ, ಕಾಂಗ್ರೆಸ್ ಜಾಗರ ಹೋಬಳಿ ಅಧ್ಯಕ್ಷ ಪ್ರಸನ್ನ, ಮುಖಂಡರುಗಳಾದ ಬಿ.ವಿ.ಕೃಷ್ಣಮೂರ್ತಿ, ಮನ್ಸೂರ್ ಮತ್ತಿತರರು ಹಾಜರಿದ್ದರು.

MLA HD Tammaiah visited the rain-damaged area

About Author

Leave a Reply

Your email address will not be published. Required fields are marked *