September 16, 2024

ವೈಟ್‍ಬೋರ್ಡ್ ರ್ಯಾಪಿಡ್ ಬೈಕ್‍ ವಿರುದ್ಧ ಆಟೋ ಚಾಲಕರ ಪ್ರತಿಭಟನೆ

0
ವೈಟ್‍ಬೋರ್ಡ್ ರ್ಯಾಪಿಡ್ ಬೈಕ್‍ ವಿರುದ್ಧ ಆಟೋ ಚಾಲಕರ ಪ್ರತಿಭಟನೆ

ವೈಟ್‍ಬೋರ್ಡ್ ರ್ಯಾಪಿಡ್ ಬೈಕ್‍ ವಿರುದ್ಧ ಆಟೋ ಚಾಲಕರ ಪ್ರತಿಭಟನೆ

ಚಿಕ್ಕಮಗಳೂರು:  ಅನಧಿಕೃತವಾಗಿ ‌ವೈಟ್‍ಬೋರ್ಡ್ ರ್ಯಾಪಿಡ್ ಬೈಕ್‍ನಲ್ಲಿ ಪ್ರಯಾಣಿಕ ರನ್ನು ಬಾಡಿಗೆ ರೂಪದಲ್ಲಿ ಕರೆದೊಯ್ಯುತ್ತಿರುವ ವ್ಯಕ್ತಿಯನ್ನು ನಗರದ ಆಟೋ ಚಾಲಕರುಗಳು ತಡೆಹಿಡಿದು ನಗರಠಾಣೆಗೆ ಒಪ್ಪಿಸಿ, ಆತನ ವಿರುದ್ಧ ಕ್ರಮಕ್ಕೆ ನೂರಾರು ಚಾಲಕರು ಆಗ್ರಹಿಸಿದ ಪ್ರಸಂಗ ಶುಕ್ರವಾರ ಠಾಣೆ ಮುಂಭಾಗದಲ್ಲಿ ನಡೆಯಿತು.

ಮುಂಜಾನೆ ಸಮಯದಲ್ಲಿ ರ್ಯಾಪಿಡ್‍ಬೈಕ್ ಚಾಲಕ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ವೇಳೆ ಸೂ ಕ್ಷ್ಮವಾಗಿ ಗಮನಿಸಿದ ಆಟೋಚಾಲಕರು ಆ ವ್ಯಕ್ತಿಯನ್ನು ಹಿಡಿದು ಠಾಣೆಗೆ ಒಪ್ಪಿಸಿ, ತದನಂತರ ಆರ್‍ಟಿಓ ಅಧಿಕಾರಿಗಳು ಧಾವಿಸುವವರೆಗೂ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಠಾಣೆಯ ಆವರ ಣದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಯಿತು.

ಬಳಿಕ ನಗರ ಆಟೋ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ ಪ್ರತಿನಿತ್ಯವು ಅನಧಿ ಕೃತವಾಗಿ ರ್ಯಾಪಿಡ್‍ಬೈಕ್ ಚಾಲಕರು, ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಪಿಕಪ್ ಮಾಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬಡಆಟೋ ಚಾಲಕರು ಹಾಗೂ ಮಾಲೀಕರ ಹೊಟ್ಟೆ ಮೇಲೆ ಹೊಡೆದಂತಾ ಗುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಅನಧಿಕೃತವಾಗಿ ಎರಡ್ಮೂರು ಫುಡ್ ಡೆಲಿವರಿ ಕಂಪನಿಗಳು ಎಲ್ಲೆಂದರಲ್ಲಿ ಹಾಗೂ ಗೋಡೆ ಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಫುಡ್ ಡೆಲಿವರಿ ಮಾಡುತ್ತೇವೆಂದು ಪ್ರಚಾರಪಡಿಸುತ್ತಿದೆ. ಆದರೆ ಫುಡ್ ಡೆಲಿ ವರಿ ಜೊತೆಗೆ ಪ್ರಯಾಣಿಕರನ್ನು ಇಂತಿಷ್ಟು ಹಣವೆಂದು ನಿಗಧಿಗೊಳಿಸಿ ರ್ಯಾಪಿಡ್‍ಬೈಕಿನಲ್ಲಿ ಪಿಕಪ್ ಮಾಡಲಾ ಗುತ್ತಿದೆ ಎಂದು ದೂರಿದರು.

ಈ ಬಗ್ಗೆ ಅನೇಕ ಬಾರಿ ಆರ್‍ಟಿಓ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಕ್ರಮಕೈ ಗೊಳ್ಳುತ್ತಿಲ್ಲ. ಈಗಾಗಲೇ ನಗರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಆಟೋಗಳಿವೆ. ಅಲ್ಲದೇ ಉಚಿತ ಬಸ್ ಪ್ರಯಾ ಣದಿಂದ ಆಟೋ ಚಾಲಕರಿಗೆ ಬಹಳಷ್ಟು ಒಡೆತ ಬಿದ್ದಿದೆ. ಈ ನಡುವೆ ರ್ಯಾಪಿಡ್‍ಬೈಕ್‍ಗಳ ಹಾವಳಿ ಹೆಚ್ಚಳ ದಿಂದ ಚಾಲಕರ ಬಾಡಿಗೆ ಹಾಗೂ ತಿನ್ನುವ ಅನ್ನಕ್ಕೂ ಕಲ್ಲು ಬೀಳುತ್ತಿದೆ ಎಂದರು.

ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಿರುವ ಆಟೋಚಾಲಕರು ದಿನನಿತ್ಯ ಬಾಡಿಗೆಗೆ ಬಹಳಷ್ಟು ಕಷ್ಟಪಡಬೇಕಿದೆ. ಒಂದೊಂದು ದಿನವು ಬಾಡಿಗೆಯಿಲ್ಲದೇ ಪರಿತಪಿಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ಜೀವನ ಸುಧಾರಣೆ, ಆಟೋ ಇಎಂಐ ನಡುವೆ ರ್ಯಾಪಿಡ್‍ಬೈಕ್ ಹಾವಳಿ ಹೆಚ್ಚಳಗೊಂಡು ಆಟೋ ಚಾಲಕರು ಮತ್ತು ಮಾಲೀಕರಿಗೆ ಜೀವನ ನಡೆಸುವುದೇ ದುಸ್ತರವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿ ಸಿದರು.

ಸ್ಥಳಕ್ಕೆ ಧಾವಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರಿಗೆ ಜಿಲ್ಲಾ ಹಾಗೂ ನಗರ ಆಟೋ ಸಂಘದಿಂದ ಮನವಿ ಸಲ್ಲಿಸಿ ಕೂಡಲೇ ರ್ಯಾಪಿಡ್‍ಬೈಕಿನಲ್ಲಿ ಬಾಡಿಗೆ ಹೋಗುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಬೇಕು ಎಂದರು. ಇದಕ್ಕೆ ಪ್ರತಿಯಿಸಿದ ಕೃಷ್ಣಮೂರ್ತಿ ಆಟೋ ಚಾಲಕರಿಗೆ ಸಂಕಷ್ಟಗಳಿಗೆ ಇಲಾ ಖೆ ಸ್ಪಂದಿಸಲಿದೆ. ಈ ರೀತಿಯ ಅನಧಿಕೃತವಾಗಿ ಬಾಡಿಗೆ ಹೋಗುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂಬ ಭರವಸೆ ನೀಡಿದ ಮೇರೆಗೆ ಆಟೋ ಚಾಲಕರು ಠಾಣೆಯಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‍ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಚಾಲಕರಾದ ಅಶ್ವತ್, ವೆಂಕಟೇಶ್, ಅಬ್ಬಾಸ್, ಮಂಜುನಾಥ್, ರಿಯಾಜ್ ಮತ್ತಿತರರು ಹಾಜರಿದ್ದರು.

Auto drivers protest against whiteboard rapid bike

About Author

Leave a Reply

Your email address will not be published. Required fields are marked *