ಶಾಸಕ ಹೆಚ್.ಡಿ.ತಮ್ಮಯ್ಯ ಹುಟ್ಟುಹಬ್ಬ ಅಂಗವಾಗಿ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ
ಚಿಕ್ಕಮಗಳೂರು: ಕ್ಷೇತ್ರದ ಜನಪ್ರಿಯ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತರುಗಳು ಹಾಗೂ ಕುಟುಂಬಸ್ಥರು ನಗರದ ಹೆರಿಗೆ ಆಸ್ಪತ್ರೆಗೆ ತೆರಳಿ ಮಹಿಳೆಯರಿಗೆ ಹಣ್ಣು ವಿತರಿಸುವ ಮೂಲಕ ಬುಧವಾರ ಸಂಭ್ರಮಾಚರಣೆ ನಡೆಸಿದರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಶಾಸಕ ರಾಗಿ ಆಯ್ಕೆಗೊಂಡು ಜನಪರ ಕಾಳಜಿ ಮೂಲಕ ಕೆಲಸ ಮಾಡಬೇಕು. ಮುಂದಿನ ಎಲ್ಲಾ ಜನಸ್ನೇಹಿ ಆಡಳಿತಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಜೊತೆಗಿರುತ್ತೇವೆ ಎಂದು ಹೇಳಿದರು.
ಇದೇ ವೇಳೆ ಹುಟ್ಟುಹಬ್ಬದ ಅಂಗವಾಗಿ ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಮಂಗಳಾ ತಮ್ಮಯ್ಯ, ನಗರಸಭಾ ಸದಸ್ಯರಾದ ಶಾದಬ್, ಜಾವೀದ್, ಪರಮೇಶ್, ಎನ್ಎಸ್ಯುಐ ಅಧ್ಯಕ್ಷ ಶ್ರೀಕಾಂತ್, ಮುಖಂಡರುಗಳಾದ ಪಿ.ಎಲ್.ಪ್ರವೀಣ್, ಪ್ರಕಾಶ್ರೈ, ಸಿ.ಸಿ.ಮಧುಗೌಡ, ಸಂದೀಪ್, ನಾಗಭೂಷಣ್ ಮತ್ತಿತರರು ಹಾಜರಿದ್ದರು.
Fruit distribution at the hospital as part of the birthday of MLA HD Tammaiah