September 19, 2024

ಕಡೂರು ಪಟ್ಟಣದ ಯುವತಿಯ ಅನುಮಾನಾಸ್ಪದ ಸಾವು

0
ಕಡೂರು ಪಟ್ಟಣದ ರುಕ್ಮಿಣಿ

ಕಡೂರು ಪಟ್ಟಣದ ರುಕ್ಮಿಣಿ

ಚಿಕ್ಕಮಗಳೂರು: ಮಗಳ ಅನುಮಾನಾಸ್ಪದ ಸಾವಿಗೆ ನ್ಯಾಯ ಕೊಡಿಸುವಂತೆ ಮೃತ ಮಹಿಳೆಯ ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಕಣ್ಣೀರಿಟ್ಟು ಗೋಳಾಡಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

ಕಡೂರು ಪಟ್ಟಣದ ರುಕ್ಮಿಣಿ(೩೧) ಮೃತ ಮಹಿಳೆ, ಕಡೂರು ತಾಲೂಕು ಕಣ್ಣನ್ ಎಂಬುವರು ಮಂಡ್ಯ ಜಿಲ್ಲೆ ಮುದ್ದನ ಹಳ್ಳಿ ಗ್ರಾಮದ ರುಕ್ಮಿಣಿ ಅವರನ್ನು ೧೪ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಡೂರು ಪಟ್ಟಣದಲ್ಲಿ ವಾಸವಾಗಿ ದ್ದರು.

ಸೋಮವಾರ ಮಧ್ಯಾಹ್ನ ೧೨ಗಂಟೆ ವೇಳೆ ರುಕ್ಮಿಣಿ ಸಾವನಪ್ಪಿದ್ದು, ಮಗಳ ಸಾವು ಅನುಮಾನಾಸ್ಪದವಾಗಿದೆ. ಆತ್ಮ ಹತ್ಯೆಯೆಂದು ಪ್ರಕರಣವನ್ನು ಮರೆಮಾಚಲು ಪೊಲೀಸರು ಯತ್ನಿಸುತ್ತಿದ್ದಾರೆ. ಮಗಳ ಸಾವಿನ ಬಳಿಕ ಇಬ್ಬರು ಮೊಮ್ಮಕ್ಕಳು ಕಣ್ಣರೆಯಾಗಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ದೂರಿದರು.

ಕಣ್ಣನ್ ರುಕ್ಮಿಣಿಯನ್ನು ಮದುವೆಯಾದಾಗಿನಿಂದ ಅತ್ತೆ, ಮಾವ, ಗಂಡ ಕುರುಕುಳ ನೀಡುತ್ತಿದ್ದರು. ರುಕ್ಮಿಣಿ ಮೇಲೆ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಿದ್ದು, ರುಕ್ಮಿಣಿಯನ್ನು ಆಕೆಯ ಪತಿ ಕಣ್ಣನ್ ಕೊಲೆ ಮಾಡಿದ್ದಾರೆಂದು ಆರೋಪಿಸಿದರು.

ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಕಾಣೆಯಾಗಿರುವ ಮೊಮ್ಮಕ್ಕಳನ್ನು ಹುಡುಕಿಕೊಡಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Suspicious death of young woman from Kadur town

 

About Author

Leave a Reply

Your email address will not be published. Required fields are marked *

You may have missed