September 19, 2024

ಸಾಂಸ್ಕೃತಿಕ ಕಲೆಗಳ ಉಳಿವಿಗಾಗಿ ಸಿರಿಗನ್ನಡ ವೇದಿಕೆ

0
ಜಿಲ್ಲಾ ಘಟಕ ಅಧ್ಯಕ್ಷ ಶಿಕ್ಷಕ ಎಂ.ಆರ್.ಪ್ರಕಾಶ್ ಸುದ್ದಿಗೊಷ್ಠಿ

ಜಿಲ್ಲಾ ಘಟಕ ಅಧ್ಯಕ್ಷ ಶಿಕ್ಷಕ ಎಂ.ಆರ್.ಪ್ರಕಾಶ್ ಸುದ್ದಿಗೊಷ್ಠಿ

ಚಿಕ್ಕಮಗಳೂರು: ಕನ್ನಡ ನಾಡು, ನುಡಿ, ಭಾಷೆ, ಸಾಂಸ್ಕೃತಿಕ ಕಲೆಗಳ ಉಳಿವಿಗಾಗಿ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್ ಗೋನಾಳ ನೇತೃತ್ವದಲ್ಲಿ ಸಿರಿಗನ್ನಡ ವೇದಿಕೆ ರಚಿಸಲಾಗಿದೆ ಎಂದು ಜಿಲ್ಲಾ ಘಟಕ ಅಧ್ಯಕ್ಷ ಶಿಕ್ಷಕ ಎಂ.ಆರ್.ಪ್ರಕಾಶ್ ತಿಳಿಸಿದರು.

ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಜಿಲ್ಲೆಯ ಪದಾಧಿಕಾರಿಗಳು ಹಾಗೂ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲು ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಹೇಳಿ, ಜಿಲ್ಲೆಯ ಕಡೂರು ತಾಲ್ಲೂಕಿನ ವೈ.ಮಲ್ಲಾಪುರ ಗ್ರಾಮದವರಾದ ತಾವು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ಸಾಹಿತ್ಯ ಸಂಘಟಕರಾಗಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕೆಲವು ವಿವಿಧ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.

ಕಳೆದ ೨೫ ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡದ ಕಂಪನ್ನು ಹರಡಲು ಆಸಕ್ತಿ ವಹಿಸಿದ್ದೇನೆ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸದ ಮೂಲಕ ರಾಜ್ಯ ಸಾಹಿತ್ಯ ಪರಿಷತ್ ಆಶಯದಂತೆ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲು ಬದ್ದನಾಗಿದ್ದೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಗೌರವ ಅಧ್ಯಕ್ಷ ಎಂ.ಸಿ ಶಿವಾನಂದ ಸ್ವಾಮಿ, ಮುಖಂಡರಾದ ಸುರೇಶನಾಯ್ಕ್, ತಿಮ್ಮಯ್ಯ, ಎಸ್.ಪಿ ಮರುಳಸಿದ್ದಪ್ಪ, ಸಿಲ್ವೆಸ್ಟರ್, ಸದಾಶಿವ ಮತ್ತಿತರರಿದ್ದರು.

District unit president teacher M.R. Prakash news conference

About Author

Leave a Reply

Your email address will not be published. Required fields are marked *

You may have missed