ಸಾಂಖೀಕ ನಿರೀಕ್ಷಕ ಸೇರಿ ಇಬ್ಬರು ಲೋಕಾಯುಕ್ತರ ಬಲೆಗೆ
ಚಿಕ್ಕಮಗಳೂರು: ಮರಣ ದೃಢೀಕರಣ ಪತ್ರ ನೀಡಲು ವಿಧವೆ ಮಹಿಳೆಯಿಂದ ೫ ಸಾವಿರ ರುಪಾಯಿ ಪಡೆಯುವ ವೇಳೆಯಲ್ಲಿ ಇಲ್ಲಿನ ತಾಲೂಕು ಕಚೇರಿ ಸಾಂಖೀಕ ನಿರೀಕ್ಷಕ ಇಕ್ಬಾಲ್ ಹಾಗೂ ಇದೇ ಕಚೇರಿಯ ಕಂಪ್ಯೂಟರ್ ಆಪರೇಟರ್ ಜೀವನ್ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರಿನ ಆದಿಶಕ್ತಿ ನಗರದ ನಿವಾಸ್ ತಾಜ್ ಅವರ ಪತಿ ೨೦೨೨ರ ಡಿಸೆಂಬರ್ ೧೯ ರಂದು ನಿಧನರಾಗಿದ್ದು, ಅವರ ಮರಣ ದೃಢೀಕರಣ ಪತ್ರಕ್ಕಾಗಿ ೨೦೨೩ರ ಜುಲೈ ೧೨ ರಂದು ತಾಜ್ ಅವರು ತಾಲೂಕು ಕಚೇರಿಯಲ್ಲಿರುವ ಸಾಂಖೀಕ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮರಣ ದೃಢೀಕರಣ ಪತ್ರ ಕೊಡುವ ಸಂಬಂಧ ತಾಜ್ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದ ಇಕ್ಬಾಲ್, ನ್ಯಾಯಾಲಯದ ಖರ್ಚು ಸೇರಿದಂತೆ ೧೨ ಸಾವಿರ ರುಪಾಯಿ ಆಗುತ್ತದೆ ಎಂದು ಹೇಳಿ ವಾಪಸ್ ಕಳುಹಿಸಿದ್ದರು.
ನಂತರ ಇಕ್ಬಾಲ್ ಅವರೊಂದಿಗೆ ಮಾತನಾಡಿರುವ ಮೊಬೈಲ್ ಆಡಿಯೋ ಸಹಿತ ತಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಗುರುವಾರ ಬೆಳಿಗ್ಗೆ ಸಾಂಖೀಕ ಕಚೇರಿಯಲ್ಲಿಯೇ ಇಕ್ಬಾಲ್ ಅವರಿಗೆ ತಾಜ್ ಅವರು ೫ ಸಾವಿರ ರುಪಾಯಿ ನೀಡಲು ಮುಂದಾಗುತ್ತಿದ್ದಂತೆ, ಈ ಹಣವನ್ನು ಕಂಪ್ಯೂಟರ್ ಆಪರೇಟರ್ ಜೀವನ್ಗೆ ನೀಡುವಂತೆ ಹೇಳಿದರು.
ಹಣ ಕೊಡುವ ಸಂದರ್ಭದಲ್ಲಿ ಇಕ್ಬಾಲ್ ಹಾಗೂ ಜೀವನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಽಸಿದರು. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್ಸ್ಪೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿಗಳಾದ ಸವಿನಯ್, ವಿಜಯ್ ಭಾಸ್ಕರ್, ಸಲ್ಮಾ ಬೇಗಂ, ರವಿ, ಪ್ರಕಾಶ್ ಪಾಲ್ಗೊಂಡಿದ್ದರು.
A statistical inspector and two Lokayuktas were caught in the trap