September 19, 2024

ಸೆ.8ಕ್ಕೆ ಪರ್ಯಾಯ ಚಲನಚಿತ್ರ ಬಿಡುಗಡೆ

0

????????????????????????????????????

ಚಿಕ್ಕಮಗಳೂರು: ಬೆಳಗಾವಿಯ ಸಮಾನ ಮನಸ್ಕರು ಸೇರಿ ಮನತಾ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ವಿಶಿಷ್ಟ ಕಥಾಹಂದರವುಳ್ಳ ಸಮಾಜಕ್ಕೆ ಉತ್ತಮ ಸಂದೇಶನೀಡುವ ಪರ್ಯಾಯ ಚಲನಚಿತ್ರ ನಿರ್ಮಿಸಲಾಗಿದ್ದು, ಸೆಪ್ಟೆಂಬರ್ ಮೊದಲವಾರ ಬಿಡುಗಡೆಯಾಗಲಿದೆ.

ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯವರೆ ಆದ ಚಿತ್ರದ ನಿರ್ದೇಶಕ ರಮಾನಂದಮಿತ್ರ ಮಾತನಾಡಿ, ಬೆಳಗಾವಿ ಮತ್ತು ಆ ಜಿಲ್ಲೆಯ ಚಿಗುರೆ ಎಂಬ ಗ್ರಾಮದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಹೊಸಅನುಭವ ನೀಡಿದೆ. ಚಿತ್ರದಲ್ಲಿ ೪ ಹಾಡುಗಳಿದ್ದು, ಗುನುಗುವಂತಿವೆ ಎಂದು ಹೇಳಿದರು.

ರಾಜ್ಯದಲ್ಲಿ ೩೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು,ರಾಜಕುಮಾರ್,ಮುರುಗೇಶ ಬಿ.ಶಿವಪೂಜಿ, ರಂಜನ್‌ಕುಮಾರ್, ಜಯಂತಿರೇವಡಿ, ಅರ್ಚನಾಶೆಟ್ಟಿ, ಪ್ರಿಯಾಕೊಠಾರಿ,ಭೀಮಾನಾಯಕ್, ಬೆಳಗಾವಿ ಕಟ್ಟಪ್ಪ, ರೋಹನ್‌ಕುಬ್ಸದ್, ರಘುನಾಥ, ಸುರೇಶ್ ಬೆಳಗಾವಿ, ದಿನೇಶ್‌ಖಾಂಡ್ಯ, ಕೆಂಪರಾಜ್ ಸಂತೋಷ್ ತಾಣಗಣದಲ್ಲಿದ್ದಾರೆಂದರು.

ರಾಜಕುಮಾರ್, ಇಂದುಮತಿ ರಾಜಕುಮಾರ್ ನಿರ್ಮಾಣಪಕರು, ಮುರುಗೇಶ್ ಬಿ.ಶಿವಪೂಜಿ, ಶಿವಾನಂದ ಚಿಕ್ಕಮಠ್ ಸಹನಿರ್ಮಾಪಕರಾಗಿದ್ದಾರೆ.ರವಿರಾಮ್ ಸಂಗೀತನೀಡಿದ್ದಾರೆ. ರಂಗಸ್ವಾಮಿಯವರ ಛಾಯಾಗ್ರಹಣವಿದೆ.ರೋಹನ್‌ಕುಬ್ಸದ್, ಕಾರ್ಯಕಾರಿ ನಿರ್ಮಾಪಕರು, ಜೀವನ್‌ಪ್ರಕಾಶ್ ಅವರ ಸಂಕಲನವಿದೆ. ಪ್ರಸಾದನ ಮೇಕಪ್‌ಮೂರ್ತಿಯವರದ್ದಾಗಿದೆ ಎಂದು ತಿಳಿಸಿದರು.

ಕಣ್ಣುಕಾಣಿಸದ, ಕವಿಕೇಳಿಸದ, ಮಾತುಬಾರದವರ ಜೀವನ ಕ್ರಮವನ್ನು ಹೇಳಲಾಗಿದೆ. ಚಿತ್ರದಲ್ಲಿ ವಿಶೇಷ ಕಥಾಹಂದರವಿದೆ. ಚಿತ್ರನೋಡಿ ಹೊರಗೆ ಬಂದಾಗ ಕಣ್ಣಲ್ಲಿ ನೀರು ಜಿನುಗುವುದು ಗ್ಯಾರಂಟಿ ಎಂದು ಹೇಳಿದರು.ಜಿಲ್ಲೆಯ ಕಡೂರಿನ ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಮಾತುಕತೆ ನಡೆದಿದೆ ಎಂದು ಹೇಳಿದರು. ರಾಜಕುಮಾರ, ರಂಜನ್‌ಕುಮಾರೆ, ದಿನೇಶ್‌ಖಾಂಡ್ಯ ಇದ್ದರು.

paryāya movie release on Sep 8

 

About Author

Leave a Reply

Your email address will not be published. Required fields are marked *

You may have missed