September 19, 2024

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಜಿಲ್ಲೆಯ 23 ಶಿಕ್ಷಕರನ್ನು ಶಿಕ್ಷಣ ಇಲಾಖೆ ಆಯ್ಕೆ

0

ಚಿಕ್ಕಮಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ 2023–24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಜಿಲ್ಲೆಯ 23 ಶಿಕ್ಷಕರನ್ನು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಪ್ರಶಸ್ತಿ ಮೊತ್ತ ₹5 ಸಾವಿರ ಮತ್ತು ಫಲಕಗಳನ್ನು ಪ್ರಶಸ್ತಿ ಒಳಗೊಂಡಿರುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಜಿ. ರಂಗನಾಥಸ್ವಾಮಿ ತಿಳಿಸಿದರು.

ಹಿರಿಯ ಪ್ರಾಥಮಿಕ ವಿಭಾಗ(ಸಹಶಿಕ್ಷಕರು): ಟಿ.ಆರ್. ಜಗನ್ನಾಥಪ್ಪ ರಾಮನಹಳ್ಳಿ ಬೀರೂರು ವಲಯ, ಎಸ್. ಮಂಜುಳ, ಕಲ್ಲೇಲಿಂಗನಹಳ್ಳಿ, ಕಡೂರು ತಾ., ವಿ.ಪಿ. ವೀಣಾ ಕಡಬಗೆರೆ, ಚಿಕ್ಕಮಗಳೂರು ತಾ., ನಾಗೇಶ್‌ರಾವ್ ಬೆಳಗೊಳ, ಕೊಪ್ಪ ತಾ., ಎಚ್.ಎ. ಪ್ರಕಾಶ್ ಕಲ್ಲಗುಡ್ಡ, ಮೂಡಿಗೆರೆ ತಾ., ಎಚ್. ಮಂಜಪ್ಪ, ಶೀಗುವಾನಿ ಎನ್.ಆರ್.ಪುರ ತಾ., ಸಂಜಿದಾಬಾನು, ಸಮತಳ ತರೀಕೆರೆ ತಾ. ಇವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಪ್ರಾಥಮಿಕ ವಿಭಾಗ:  ಎಚ್.ಸಿ ಶಶಿಕಲಾ ಮುಖ್ಯಶಿಕ್ಷಕಿ ಸರಸ್ವತಿಪುರ, ಬೀರೂರು ವಲಯ,  ವೈ.ಸಿ.ಗೋಪಿ ದೈ,ಶಿಕ್ಷಕರು, ಕಾನಗೊಂಡನಹಳ್ಳಿ, ಕಡೂರು ತಾ., ಆರ್. ಸುಶೀಲ ಸ.ಶಿಕ್ಷಕರು, ಉಳುವಾಗಿಲು, ಚಿಕ್ಕಮಗಳೂರು ತಾ., ಎಂ. ಗಜೇಂದ್ರ ದೈ.ಶಿಕ್ಷಕರು, ಕೆಳಪೇಟೆ ಕೊಪ್ಪ ತಾ., ಎಸ್.ಇ. ನೇತ್ರಾವತಿ ಸ.ಶಿಕ್ಷಕಿ ಬಸ್ತಿಮಠ, ಎನ್.ಆರ್.ಪುರ ತಾ., ‌ಟಿ.ಎಚ್. ವಿಜಯ್‌ಕುಮಾರ್ ಸ.ಶಿಕ್ಷಕರು, ವಿದ್ಯಾನಗರ, ಶೃಂಗೇರಿ ತಾ., ಸಿ.ಡಿ. ಓಂಕಾರಪ್ಪ ಬಡ್ತಿ ಮುಖ್ಯಶಿಕ್ಷಕರು, ರಂಗಾಪುರ, ತರೀಕೆರೆ ತಾಲ್ಲೂಕು ಇವರನ್ನು ಆಯ್ಕೆ ಮಾಡಲಾಗಿದೆ.

ಪ್ರೌಢಶಾಲಾ ವಿಭಾಗ: ಬಿ.ಸಿ. ಚಂದ್ರುಶೇಖರ್ ದೈ.ಶಿಕ್ಷಕರು ಲಿಂಗದಹಳ್ಳಿ ಬೀರೂರು ವಲಯ, ಸಿ.ಜಿ. ಶಿಕ್ಷಕರು ಯಶವಂತ್‌ಕುಮಾರ್ ಸ.ಶಿಕ್ಷಕ, ಚೌಳಹಿರಿಯೂರು, ಕಡೂರು ತಾ., ಎಂ.ಕುಮಾರ್ ದೈ.ಶಿಕ್ಷಕರು ಬಸ್ಕಲ್, ಚಿಕ್ಕಮಗಳೂರು ತಾ., ಎಚ್.ಆರ್. ರವಿಕುಮಾರ್, ಮುಖ್ಯಶಿಕ್ಷಕರು ಹೇರೂರು, ಕೊಪ್ಪ ತಾ., ಶಶಿಕಲಾ ಸ.ಶಿಕ್ಷಕಿ ಗಬ್ಗಲ್, ಮೂಡಿಗೆರೆ ತಾ., ಟಿ. ಮಥಾಯಿ ಸ.ಶಿಕ್ಷಕಿ ಮುತ್ತಿನಕೊಪ್ಪ, ಎನ್.ಆರ್.ಪುರ ತಾ., ನಾರಾಯಣ ಸ.ಶಿಕ್ಷಕರು ತೊರಹಡ್ಲು, ಶೃಂಗೇರಿ ತಾ., ಎಂ.ಆರ್. ಜಗದೀಶಪ್ಪ ದೈ.ಶಿಕ್ಷಕರು ಅಜ್ಜಂಪುರ, ತರೀಕೆರೆ ತಾ. ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Selection of 23 teachers of the best teachers at the district level

About Author

Leave a Reply

Your email address will not be published. Required fields are marked *

You may have missed