September 20, 2024

ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತೇಜನ

0
ಕರ್ತಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಕರ್ತಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಚಿಕ್ಕಮಗಳೂರು: ಮನೆಗಳಲ್ಲಿ ಪೋಷಕರು ಮಕ್ಕಳಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಯನ್ನು ಗುರುತು ಮಾಡುವಂತಹ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ತಾಲ್ಲೂಕಿನ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬಂಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಮೇಳದಿಂದ ಪ್ರಾರಂಭವಾದ ಕಾರ್ಯಕ್ರವು ನಂತರದ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಅಂದಿನ ಶಿಕ್ಷಣ ಸಚಿವ ಗೋವಿಂದೇಗೌಡ ರವರು ೨೦೦೧-೦೨ರಲ್ಲಿ ಪ್ರತಿಭಾ ಕಾರಂಜಿಯನ್ನಾಗಿ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾರಂಭ ಮಾಡಿದರು ಎಂದರು.

ಶಿಕ್ಷಕರೆಂದರೇ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕನ್ನು ಚೆಲ್ಲುವವರು, ಚಂದ್ರಲೋಕಕ್ಕೆ ತೆರಳಿದ ಇಸ್ರೋ ವಿಜ್ಞಾನಿಗಳು ಸರ್ಕಾರಿ ಶಾಲೆಯಲ್ಲಿ ಕಲಿತವರು, ಕ್ಷೇತ್ರದ ಜನರು ನನಗೆ ನೀಡಿದ ಜನ ಸೇವಕನ ಜವಾಬ್ದಾರಿಗೆ ಹೃದಯಪೂರ್ವಕ ಕೃತಜ್ಞತೆಯನ್ನು ತಿಳಿಸಿದರು.

ಕ್ಲಸ್ಟರ್ ಹಂತದಲ್ಲಿ ಸರ್ಕಾರದಿಂದ ೫ ರಿಂದ ೬ ಸಾವಿರ ರೂಗಳ ಮಾತ್ರ ಅನುದಾನದ ದೋರೆಯುತ್ತದೆ, ಶಿಕ್ಷಕರು, ದಾನಿಗಳು ಮತ್ತು ಊರಿನವರು ಸೇರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡುತ್ತಾರೆ ಎಂದರು.

ಡಾ. ಬಿ.ಆರ್ ಅಂಬೇಡ್ಕರ್ ರವರು ಮಹಿಳೆಯರಿಗೆ ಮತದಾನ ಮಾಡುವ ಹಕ್ಕನ್ನು ನೀಡಿದವರು, ಬುದ್ಧ, ಬಸವ, ಕನಕದಾಸ ರವರು ಒಂದು ಧರ್ಮ, ಜಾತಿಗೆ ಸೀಮಿತರಾದವರಲ್ಲ ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದ ಮಹಾ ಪುರುಷರು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ನಾಗರಾಜ್ ಮಾತನಾಡಿ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಊರಿನ ಜಾತ್ರೆಯ ರೀತಿಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ, ಶಿಕ್ಷಣ ಎಂದರೇ, ಓದು ಬರಹ ಮಾತ್ರವಲ್ಲ ವಿದ್ಯಾರ್ಥಿಗಳ ಜೀವನ ಪರಿಪೂರ್ಣ ಆಗಬೇಕಾದರೆ ಕ್ರೀಡೆ, ಪ್ರತಿಭಾ ಕಾರಂಜಿಯು ಅತ್ಯಾವಶ್ಯಕ ಎಂದರು.

ವಿದ್ಯಾರ್ಥಿಗಳು ಶಿಕ್ಷಕರಿಂದ ೨೫% ಪಠ್ಯ ಪುಸ್ತಕಗಳಿಂದ ಕಲಿತರೆ, ೨೫% ಜೀವನದ ಕೌಸಲ್ಯಗಳನ್ನು ಸಹಪಾಠಿಗಳಿಂದ ಕಲಿಯಲಾಗುತ್ತದೆ, ಮನೆ ಮತ್ತು ಸಮುದಾಯದಿಂದ ೨೫% ಮತ್ತು ಸ್ವತಃ ೨೫% ಕಲಿತು ಪರಿಪೂರ್ಣರಾಗುತ್ತಾರೆ, ಒಬ್ಬ ವಿದ್ಯಾರ್ಥಿಯಲ್ಲಿರುವ ಆಸಕ್ತಿ ಮತ್ತು ಅಭಿವ್ಯಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರಗತಿಯನ್ನು ಹೊಂದಲು ಸಹಕಾರ ನೀಡಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ್.ಬಿ.ಸಿ, ಕ.ಸ.ಬಾ ಹೋಬಳಿ ಶಿಕ್ಷಣ ಸಂಯೋಜಕರಾದ ಜಾನಕಿ, ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿಗುರುಸ್ವಾಮಿ, ಉಪಾಧ್ಯಕ್ಷ ಗಣೇಶ್‌ರಾಜ್ ಅರಸ್, ಸದಸ್ಯರಾದ ಪುಟ್ಟಸ್ವಾಮಿಶೆಟ್ರು, ಸಿದ್ಧರಾಮೇಶ್ವರ.ಸಿ.ಎಲ್, ವಿದ್ಯಾ ಕಾಫಿ ಜನರಲ್ ಮ್ಯಾನೇಜರ್ ಜಯದೇವ್.ಎಂ.ಅಲೆಬಾವಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪರಮೇಶ್, ಉಪಾಧ್ಯಕ್ಷೆ ವಿಲ್ಮಾ, ಸಂಘಟನಾ ಕಾರ್ಯದರ್ಶಿ ವನಜಾಕ್ಷಿಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಯ್ಯ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರವಿ, ಉಪಾಧ್ಯಕ್ಷೆ ಮೋಹನಾಕ್ಷಿ, ನಿರ್ದೇಶಕರಾದ ಜೋಗಪ್ಪ, ದಿನೇಶ್, ಗೀತಾ, ಪ್ರಧಾನ ಕಾರ್ಯದರ್ಶಿ ಸುಮಿತ್ರಾ, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುಂದರೇಶ್, ರಜಿಯಾ, ಪ್ರಶಸ್ತಿ ಪತ್ರ ದಾನಿಗಳಾದ ಪ್ರೇಮ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಆಶಾಹೇಮಂತ್ ಸ್ವಾಗತಿಸಿ ವಂದಿಸಿದರು.

Karthikere is a cluster level talent fountain programme

About Author

Leave a Reply

Your email address will not be published. Required fields are marked *