September 20, 2024

ಹಿಂದೂ ಮಹಾಗಣಪತಿ ದಶಮಾನೋತ್ಸವ ಸಂಭ್ರಮ

0
ಸಂತೋಷ್ ಕೊಟ್ಯಾನ್ ಪತ್ರಿಕಾಗೋಷ್ಠಿ

ಸಂತೋಷ್ ಕೊಟ್ಯಾನ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಹಿಂದೂ ಮಹಾಗಣಪತಿ ದಶಮಾನೋತ್ಸವ ಸಂಭ್ರಮ.ಸೆ.೧೮ ರ ಸೋಮವಾರದಿಂದ ೩೦ ರಂದು ಶನಿವಾರದವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ ಎಂದು ಸಮಿತಿಯ ಸಂತೋಷ್ ಕೊಟ್ಯಾನ್ ತಿಳಿಸಿದರು.‌

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಿನನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ವಷ ವಿಶೇಷವಾಗಿ ವಿವಿಧ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು ಹಾಗೆ ಹೊಯ್ಸಳ ಶೈಲಿಯಲ್ಲಿ ಪೆಂಡಾಲ್ ನಿರ್ಮಾಣ ಮಾಡಿದ್ದು ಹನುಮಂತಪ್ಪ ವೃತ್ತದಲ್ಲಿ ಇಸ್ರೋ ಚಂದ್ರಯಾನ-೩ ಯಶಸ್ಸಿನ ಹಿನ್ನೆಲೆಯಲ್ಲಿ ಮಹದ್ವಾರ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.

ದಶಮಾನೋತ್ಸವದ ವಿಶೇ?ವಾಗಿ ಶ್ರೀ ಓಂಕಾರೇಶ್ವರ ಗಣಪತಿ ದೇವಸ್ಥಾನ ಸುತ್ತಮುತ್ತಲು ದೀಪಲಂಕಾರದಿಂದ ಶೃಂಗರಿಸುತ್ತಿದ್ದು ಸೆ.೨೭ ರಂದು ಬುಧವಾರ ಶ್ರೀಗಣಹೋಮ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸೆ.೨೮ ರಂದು ಗುರುವಾರ ವಿಶೇ?ವಾಗಿ ಪ್ರತಿ ಮನೆಗಳಿಂದ ಮೋದಕಗಳನ್ನು ಸಂಗ್ರಹಿಸುವ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

ಸೆ.೩೦ ರಂದು ಶನಿವಾರ ಮಧ್ಯಾಹ್ನ ೧:೦೦ಗೆ ಶ್ರೀ ಅವರ ವಿಸರ್ಜನಾ ಮೆರವಣಿಗೆ ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದು, ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಸಿಡಿಮದ್ದು ಪ್ರದರ್ಶನ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ವಿಶೇ? ಆಕ?ಣೆಯಾಗಿದೆ ಎಂದು ಹೇಳಿದರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಚಿಕ್ಕಮಗಳೂರಿನ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸದಾಶಿವಪ್ಪ, ಕಾರ್ಯದರ್ಶಿ ಕೃಫಾ, ಪ್ರದೀಪ್, ದೀಪಕ್ ಸಿ.ಆರ್, ನಯನ ಉಪಸ್ಥಿತರಿದ್ದರು.

Santosh Kotyan press conference

About Author

Leave a Reply

Your email address will not be published. Required fields are marked *