ರೈಲ್ವೆ ರಸ್ತೆಯಿಂದ ಮೇಲು ಸೇತುವೆಗೆ ಮೂರುಮನೆಹಳ್ಳಿ ಮತ್ತು ಕೋಟೆ ಬಡಾವಣೆ ನಿವಾಸಿಗಳ ಮನವಿ
ಚಿಕ್ಕಮಗಳೂರು: ರೈಲ್ವೆ ರಸ್ತೆಯಿಂದ ಮೇಲು ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಇಂದು ಮೂರುಮನೆಹಳ್ಳಿ ಮತ್ತು ಕೋಟೆ ಬಡಾವಣೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೀ ಯುವಕ ಸಂಘದ ಅಧ್ಯಕ್ಷ ಎಂ.ಎಸ್.ಮಂಜೇಗೌಡ ಮನವಿ ನೀಡಿ ಮಾತನಾಡಿ ತಾಲೂಕು ಕಸಬಾ ಹೋಬಳಿ, ಚಿಕ್ಕಮಗಳೂರು ಗ್ರಾಮದ ಸರ್ವೇ ನಂ ೩೨೦, ೩೧೯, ೩೧೮ ರ ಜಮೀನಿನಲ್ಲಿ ನಮ್ಮ ಗ್ರಾಮಕ್ಕೆ ಬರುವ ರಸ್ತೆಯ ಡಾಂಬರೀಕರಣ ಆಗಿದ್ದು, ಈ ರಸ್ತೆ ಮಾರ್ಗವಾಗಿ ಗೌಡನಹಳ್ಳಿ, ತೇಗೂರು, ಮೂರುಮನೆಹಳ್ಳಿ, ಕೋಟೆ ಗ್ರಾಮಸ್ಥರು ದಿನನಿತ್ಯ ಓಡಾಡುತ್ತಿದ್ದು ಈ ರಸ್ತೆಗೆ ಅಡ್ಡಲಾಗಿ ಚಿಕ್ಕಮಗಳೂರಿನಿಂದ ಸಕಲೇಶಪುರ ಕಡೆಗೆ ರೈಲ್ವೆ ಕಾಮಗಾರಿ ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸದರಿ ರೈಲ್ವೆ ರಸ್ತೆಯಿಂದ ನಮ್ಮ ಗ್ರಾಮಸ್ಥರುಗಳು ತಮ್ಮ ತಮ್ಮ ಊರಿಗೆ ಮತ್ತು ಜಮೀನಿಗೆ ಹೋಗಲು ಮುಂದಿನ ದಿನಗಳಲ್ಲಿ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ತಾವುಗಳು ದಯಮಾಡಿ ೩೨೦, ೩೧೯, ೩೧೮ ರ ಮತ್ತು ೩೪ ರ ಜಮೀನಿನಲ್ಲಿ ಗ್ರಾಮಸ್ಥರುಗಳಿಗೆ ದಿನನಿತ್ಯ ಓಡಾಡಲು ಎರಡು ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ರಾಮ್ರಾಜ್, ಚಿಕ್ಕರಾಜು, ಮರೀಗೌಡ, ರುದ್ರೇಗೌಡ, ಬಿಲ್ಲೇಗೌಡ, ಹೇಮಂತರಾಜ್, ಮಂಜೇಗೌಡ ಪ್ರವೀಣ್, ದೇವರಾಜ್, ರಮೇಶ, ಜೀವನ್ರಂಗನಾಥ್ ಮತ್ತಿತರರಿದ್ದರು
Request for bridge over railway road