September 19, 2024

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ನಿಧನ

0
Tegur Jagadish

Tegur Jagadish

ಚಿಕ್ಕಮಗಳೂರು: ಕನ್ನಡಪರ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ (೪೯) ಸೆ. ೨೬ ರಾತ್ರಿ ವಿಧಿ ವಶರಾಗಿದ್ದಾರೆ.

ಮೃತರು ತಾಯಿ ಸಹೋದರ ,ಸಹೋದರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೂಲತಃ ನಗರಕ್ಕೆ ಹೊಂದಿಕೊಂಡಿರುವ ತೇಗೂರು ಗ್ರಾಮದ ಕೃಷಿಕ ಕುಟುಂಬದವರಾ ಜಗದೀಶ್ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದಲಿ ಗುರುತಿಸಿಕೊಂಡು ಜಿಲ್ಲಾಅಧ್ಯಕ್ಷರಾಗಿ ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ, ನಾಡು,ನುಡಿ,ಗಡಿ ವಿಚಾರವಾಗಿ ಗಟ್ಟಿಯಾಗಿ ಧ್ವನಿ ಎತ್ತುತ್ತಾ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅಲ್ಲದೇ ಅವರ ಚಿಕಿತ್ಸೆಯ ಬಗ್ಗೆ ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಮತ್ತು ವೈದ್ಯರೊಂದಿಗೆ ನಾರಾಯಣ ಗೌಡ ಸಮಾಲೋಚನೆ ನಡೆಸಿದ್ದರು. ಸುಮಾರು ೧೫ ದಿನಗಳ ಕಾಲ ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರು.

ಆದರೆ ಜಗದೀಶ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸುಮಾರು ೧೨-೩೦ ರ ಸಮಯಕ್ಕೆ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಮಧ್ಯಾನ ತೇಗೂರಿನ ಅವರ ಜಮೀನಿನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಕನ್ನಡ ಸಂಘಟನೆಗಳ ಮುಖಂಡರು,ಕಾರ್ಯಕರ್ತರು,ಸ್ಥಳೀಯ ರಾಜಕೀಯ ಮುಖಂಡರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮೃತ ಜಗದೀಶ್ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.

Karnataka Ruksana Forum District President Tegur Jagadish passed away

About Author

Leave a Reply

Your email address will not be published. Required fields are marked *

You may have missed