September 20, 2024
ಶಾಖಾದ್ರಿ ಗೌಸ್ ಮೊಹಿದ್ದೀನ್

ಶಾಖಾದ್ರಿ ಗೌಸ್ ಮೊಹಿದ್ದೀನ್

ಚಿಕ್ಕಮಗಳೂರು: ಇನಾಂ ದತ್ತಪೀಠದ  ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಪ್ರಕರಣ ಹಿನ್ನಲೆ ಶಾಖಾದ್ರಿ ಗೌಸ್ ಮೊಹಿದ್ದೀನ್ ಮೇಲೆ ಅರಣ್ಯಾಧಿಕಾರಿಗಳು  ಕೇಸ್ ದಾಖಲು ಮಾಡಿದ್ದಾರೆ.

ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರದ ಮಾರ್ಕೆಟ್ ರಸ್ತೆಯಲ್ಲಿದ್ದ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಮಾಡಿದ್ದಾರೆ.

ಕಳೆದ ರಾತ್ರಿ ಚಿರತೆ ಹಾಗೂ ಜಿಂಕೆ ಎರಡು ಪ್ರಾಣಿಯ ಚರ್ಮವನ್ನ ವಶಕ್ಕೆ ಪಡೆದಿದ್ದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ವೈಲ್ಡ್ ಲೈಫ್ ಆಕ್ಟ್ ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅರಣ್ಯ ಅಧಿಕಾರಿಗಳು ಎರಡು ಪ್ರಾಣಿಯ ಚರ್ಮವನ್ನ ಎಫ್.ಎಸ್.ಎಲ್. ವರದಿಗೆ ಕಳುಹಿಸಲಿದ್ದು, ಸದ್ಯ ಚಿಕ್ಕಮಗಳೂರು ವಲಯದ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲುಮಾಡಲಾಗಿದೆ. ಆದರೆ  ಇದೀಗ ಇನಾಂ ಶಾಖಾದ್ರಿಗೆ ಬಂಧನ ಭೀತಿ ಎದುರಾಗಿದೆ.

Inam Dattapeeth’s  śākhādrige is under threat of arrest..!

About Author

Leave a Reply

Your email address will not be published. Required fields are marked *