ನ.20 ರಿಂದ ನಗರದಲ್ಲಿ ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್
ಚಿಕ್ಕಮಗಳೂರು: ರಾಜ್ಯ ಪ್ರಶಸ್ತಿ ವಿಜೇತೆ ದಿ: ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಇಲ್ಲಿನ ರಾಣಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನ.೨೦ ರಿಂದ ೨೬ ರವರೆಗೆ ನಗರದ ಸುಭಾ? ಚಂದ್ರ ಬೋಸ್ ಆಟದ ಮೈದಾನದಲ್ಲಿ ೬ನೇ ಆವೃತ್ತಿಯ ಟಿ-೨೦ ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ನ್ನು ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಖಜಾಂಚಿ ನಟರಾಜ್ ಈ ವಿ?ಯ ತಿಳಿಸಿ ಸುಮಾರು ೧೫೦ಕ್ಕಿಂತ ಹೆಚ್ಚು ಶಿವಮೊಗ್ಗ ವಲಯದ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ) ಆಟಗಾರರು ನೋಂದಾಣಿಯನ್ನು ಮಾಡಿಕೊಂಡಿದ್ದು, ಅದರಲ್ಲಿ ೦೫ ತಂಡದ ಮಾಲೀಕರು ಆಟಗಾರರನ್ನು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು, ಈಗಾಗಲೇ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.
ಐ.ಪಿ.ಎಲ್ ಮಾದರಿಯ ಈ ಟೂರ್ನಮೆಂಟ್ನಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ರೂ.೧೦೦,೦೦೦/- ಹಾಗೂ ಆಕ?ಕ ಪಾರಿತೋ?ಕ, ದ್ವಿತೀಯ ಬಹುಮಾನ ರೂ.೫೦,೦೦೦/- ಹಾಗೂ ಆಕ?ಕ ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು.
ತಂಡದ ಮಾಲೀಕರಾದ ಅಕ್ಷಯ ಬ್ಲಾಸ್ಟರ್ಸ್ ಶರದ್, ರೈಸಿಂಗ್ ಸ್ಟಾರ್ ತಾಮ್ಸನ್, ವಸಿಷ್ಠ ಇ-ಸ್ಪೋರ್ಟ್ಸ್ ಸಂದೀಪ್, ಆಲ್-ರೆಹಮಾನ್ ವಾರಿಯರ್ಸ್ ಅಫೀಜ್, ರಕೀನ್ ಇ- ಸ್ಪೋರ್ಟ್ಸ್ ರಕೀನ್.
ಪಂದ್ಯಾವಳಿಗಳ ಉದ್ಘಾಟನೆ ನ.೨೦ರ ಸೋಮವಾರ ಬೆಳಿಗ್ಗೆ ೮.೩೦ ಕ್ಕೆ ನಗರದ ಸುಭಾ? ಚಂದ್ರ ಬೋಸ್ ಆಟದ ಮೈದಾನದಲ್ಲಿ ನೆರವೇರಲಿದ್ದು, ಸಮಾರೋಪ ಸಮಾರಂಭವು ನ.೨೬ರ ಸಂಜೆ ೫.೩೦ಕ್ಕೆ ನಡೆಯಲಿದೆ ಎಂದರು.
White Leather Ball Cricket Tournament