ತಮಿಳು ಕಾಲೋನಿಯಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ
ಚಿಕ್ಕಮಗಳೂರು: ನಗರದ ಸಂತೆ ಮೈದಾನದ ತಮಿಳು ಕಾಲೋನಿಯಲ್ಲಿ ಇರುವ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಸಮಿತಿಯಿಂದ ಅಯ್ಯಪ್ಪಸ್ವಾಮಿಯವರ ೧೯ನೇ ವ?ದ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಂದು ಬೆಳಗ್ಗೆ ೧೦:೩೦ಕ್ಕೆ ಶ್ರೀ ಕರುಮಾರಿಯಮ್ಮ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯವರಿಗೆ ಅಭಿ?ಕ ಮತ್ತು ವಿಶೇ? ಪೂಜೆ, ಭಜನೆ ನಂತರ ಮಹಾ ಮಂಗಳಾರತಿ, ಮಧ್ಯಾನ ೧೨:೩೦ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗುರುಸ್ವಾಮಿ ಕೆ.ರವಿ ಮಾತನಾಡಿ ತಾವು ಅಯ್ಯಪ್ಪಸ್ವಾಮಿ ಮಾಲೆಯನ್ನು ಕಳೆದ ೩೦ ವ?ಗಳಿಂದ ಧರಿಸುತ್ತಾ ಶ್ರದ್ಧಾಭಕ್ತಿಯಿಂದ ಶ್ರೀಗಳ ಸೇವೆ ಮಾಡುತ್ತಿದ್ದೇನೆ. ಶ್ರೀ ಅಯ್ಯಪ್ಪಸ್ವಾಮಿಯನ್ನು ೪೮ ದಿನಗಳವರೆಗೆ ಪೂಜಿಸಿ ಜ.೯ ರಂದು ಇರುಮುಡಿ ಕಟ್ಟುತ್ತೇವೆ ನಂತರ ಸಾಮೂಹಿಕವಾಗಿ ಎಲ್ಲಾ ಸ್ವಾಮಿಗಳು ಅಯ್ಯಪ್ಪ ದರ್ಶನಕ್ಕೆ ಶಬರಿಮಲೈಗೆ ತೆರಳುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಎಸ್.ಎಸ್ ಮಂಜುಸ್ವಾಮಿ, ಮುನಿಸ್ವಾಮಿ, ಪ್ರವೀಣ, ನವೀನ್, ಸತೀಶ್, ಪ್ರಶಾಂತ್, ಪುನೀತ್, ವಿನೀತ್ ಮತ್ತಿತರರು ಉಪಸ್ಥಿತರಿದ್ದರು.
Worship of Ayyappa Swamy in Tamil Colony