ನಗರದ ದಂಟರಮುಕ್ಕಿಯಲ್ಲಿ 15 ಲಕ್ಷ ರೂ ವೆಚ್ಚದ ಕಾಮಗಾರಿ
ಚಿಕ್ಕಮಗಳೂರು: ನಗರದ ದಂಟರಮಕ್ಕಿಯಲ್ಲಿ ೧೫ ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಹೆಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರೆವೇರಿಸಿದರು.
ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಸಾರ್ವಜನಿಕರ ಹಿತಾಸಕ್ತಿಯಿಂದ ನಗರಸಭಾ ಅನುದಾನದಲ್ಲಿ ೮.೫ ಲಕ್ಷ ರೂಗಳಲ್ಲಿ ರಸ್ತೆ, ಚರಂಡಿ ಹಾಗೂ ೬.೫ ಲಕ್ಷ ರೂಗಳಲ್ಲಿ ಶನೇಶ್ವರ ದೇವಸ್ಥಾನದ ಎದುರಿನ ಪಾರ್ಕಿಗೆ ಫೆನ್ಸಿನ್ ಹಾಕಲು ಶಂಕುಸ್ಥಾಪನೆ ನೆರೆವೇರಿಸಲಾಯಿತೆಂದು ತಿಳಿಸಿದರು.
ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭಾ ಆಯುಕ್ತರಾದ ಬಸವರಾಜ್ ಮಾತನಾಡಿ ದಂಟರಮುಕ್ಕಿಯಲ್ಲಿ ನಗರಸಭೆ ಅನುದಾನದಡಿ ಚರಂಡಿ ಹಾಗೂ ಶನೇಶ್ವರ ದೇವಾಲಯದ ಮುಂಭಾಗದ ಪಾರ್ಕ್ ಅಭಿವೃದ್ಧಿಗಾಗಿ ಇಂದು ಗುದ್ಧಲಿಪೂಜೆ ನೆಡೆಸಲಾಯಿತೆಂದು ತಿಳಿಸಿದರು.
ಸ್ಥಳೀಯ ಮುಖಂಡರಾದ ಶ್ರೀನಿವಾಸ್ ಮಾತನಾಡಿ ದಂಟರಮುಕ್ಕಿ ಭಾಗದಲ್ಲಿ ಹಲವಾರು ಸಮಸ್ಯೆಗಳಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರಲ್ಲಿ ಹಲವು ಬೇಡಿಕೆಯನ್ನಿಡಲಾಗಿತ್ತು, ನನ್ನ ಅವಧಿಯಲ್ಲಿ ಸಂಪೂರ್ಣವಾಗಿ ಜನರಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ ಅವರು ಪ್ರಥಮವಾಗಿ ಶಂಕುಸ್ಥಾಪನೆ ನೆರೆವೇರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ, ಇದೇ ರೀತಿ ಮನದಾಳದಿ ವಾರ್ಡ್ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗುರುಮಲ್ಲಪ್ಪ, ಸ್ಥಳೀಯ ಮುಖಂಡರುಗಳಾದ ಕೀರ್ತಿ, ಶ್ರೀನಿವಾಸ್, ಮಂಜು, ನಗರಸಭಾ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
The work costing Rs 15 lakh in Dantaramukki of the city