Foundation stone laid for construction of drain: ಉಂಡೆದಾಸರಹಳ್ಳಿಯಲ್ಲಿ ೧೪೩ ಅಡಿ ಉದ್ದದ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರದ ವಾಡ್ ನಂ. ೧೦ರ ಉಂಡೆದಾಸರಹಳ್ಳಿಯಲ್ಲಿ ೧೪೩ ಅಡಿ ಉದ್ದದ ಚರಂಡಿ ನಿರ್ಮಾಣ ಕಾಮಗಾರಿಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಂಕುಸ್ಥಾಪನೆ ನೆರೆವೇರಿಸಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ, ನಗರದ ಅಭಿವೃದ್ಧಿಗೆ ಗಮನವಹಿಸಿ, ನಗರಸಭೆ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ, ಚರಂಡಿ ನಿರ್ಮಾಣಕ್ಕಾಗಿ ೪.೯೦ ಲಕ್ಷ ರೂಗಳ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ, ನಗರಸಭೆ ಪಾರ್ಕ್, ಫುಡ್ ಕೋರ್ಟ್ ನಿರ್ಮಾಣ ಮತ್ತು ಗವನಹಳ್ಳಿ ಕೆರೆ ಅಭಿವೃದ್ಧಿಗಾಗಿ ೫ ಕೋಟಿ ೭೫ ಲಕ್ಷ ರೂಗಳ ಕಾಮಗಾರಿಗೆ ಶಾಸಕರು ಚಾಲನೆಯನ್ನು ನೀಡಿದ್ದಾರೆ, ನಿರಂತರವಾಗಿ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ, ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇದವನ್ನು ಮಾಡಿದೆ, ಜಿಲ್ಲೆಯ ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಬಳಸಬಾರದು, ಬಳಸಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭೆ ಸದಸ್ಯೆ ರೂಪಕುಮಾರ್ ಮಾತನಾಡಿ ಅಭಿವೃದ್ಧಿಯಲ್ಲಿ ನಮ್ಮ ವಾರ್ಡ್ ಹಿಂದೆ ಉಳಿದಿದೆ, ವಾರ್ಡ್ನ ರಸ್ತೆ, ಚರಂಡಿ, ಯುಜಿಡಿ ಕಾಮಗಾರಿ ಮತ್ತು ಸಮಗ್ರ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವಂತೆ ನಗರಸಭೆ ಅಧ್ಯಕ್ಷರು ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರ್ ರಶ್ಮಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾರಾಜೇಶ್, ಶೈಲಜಾ, ಕುಮಾರ್, ರಾಜೇಗೌಡ, ಸತೀಶ್, ಮಯೂರ ಹೋಟೆಲ್ ಗಿರೀಶ್, ಬಿಜೆಪಿ ಕಾರ್ಯಕರ್ತರು ಸಂಜು, ಪ್ರಮೋದ್, ಸಂತೋಷ್, ಪ್ರೀತಿ, ತನುಜ, ತುಂಗ, ಸುಮ ಇತರರು ಉಪಸ್ಥಿತರಿದ್ದರು.
Foundation stone laid for construction of drain