ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ನಿಧನಕ್ಕೆ ಜಿಲ್ಲಾ ಬಿಜೆಪಿಯಿಂದ ಶ್ರದ್ಧಾಂಜಲಿ ಸಭೆ
ಚಿಕ್ಕಮಗಳೂರು: ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಕೆ.ಶಿವರಾಂ ನಿಧನಕ್ಕೆ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಶ್ರದ್ಧಾಂಜಲಿ ಸಲ್ಲಿಸಿತು.ಸಭೆಯಲ್ಲಿ ಕೆ. ಶಿವರಾಂ ಅವರ ಪೋಟೋಗೆ ಪುಷ್ಪ ಅರ್ಚನೆ ಮೂಲಕ ಮೌನಾಚರಿಸಿ ಸಂತಾಪ ಸೂಚಿಸಿ, ಅವರ ಸೇವಾ ಕಾರ್ಯಗಳ ಗುಣಗಾನ ಮಾಡಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಶಿವರಾಂ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದರು. ತಳ ಸಮುದಾಯ ಮತ್ತು ಶೋಷಿತ ವರ್ಗಗಳು ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಶ್ರಮ ಹಾಕಿದ್ದರು. ಸೇವೆಯಲ್ಲಿದ್ದ ಸಂದರ್ಭದಲ್ಲೆ ಚಲನಚಿತ್ರರಂಗವನ್ನು ಪ್ರವೇಶಿಸಿ ಬಾನಲ್ಲೆ ಮಧುಚಂದ್ರಕರ ಚಿತ್ರದಲ್ಲಿ ನಾಯಕ ನಟರಾಗಿ ಅಮೋಘವಾಗಿ ನಟಿಸಿ ಜನಮನಗೆದ್ದಿದ್ದರು ಎಂದರು.
ಛಲವಾದಿ ಸಮಾಜವನ್ನು ರಾಜ್ಯದಲ್ಲಿ ಸದೃಢವಾಗಿ ಕಟ್ಟಲು ರಾಜ್ಯದಲ್ಲಿ ಸಂಚರಿಸಿದ್ದರು.ಬಿಜೆಪಿ ನಿಷ್ಠಾವಂತ ನಾಯಕರಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು ಎಂದು ನುಡಿ ನಮನ ಸಲ್ಲಿಸಿದ್ದರು
ಜಿಲ್ಲಾ ಬಿಜೆಪಿ ವಕಾರ್ತ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಶಿವರಾಂ ಒಬ್ಬ ಅಪರೂಪದ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ವಿಶೇಷವಾಗಿ ಎಲ್ಲಾ ವರ್ಗಗಳ ಶೋಷಿತ ಜನರ ಪರವಾಗಿ ಮಾಡಿರುವ ಕಾರ್ಯಗಳನ್ನು ಮರೆಯುವಂತಿಲ್ಲ. ಅವರ ನಿಧನ ಪಕ್ಷಕ್ಕೆ ಮತ್ತು ಛಲವಾದಿ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಕೆ.ಪಿ ವೆಂಕಟೇಶ್ ಮಾತನಾಡಿ ಐಎಎಸ್ ಅಧಿಕಾರಿಯಾಗಿದ್ದರು ಅವರಿಗೆ ಅಮ್ಮು ಬಿಮ್ಮು ಇರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು. ಸiಸ್ಯೆ, ದೂರುಗಳು ಬಂದಲ್ಲಿ ಸ್ಥಳಕ್ಕೆ ಹೋಗಿ ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಸಂತಾಪ ಸೂಚಿಸಿದರು.
ಬಿಜೆಪಿ ನಗರ ಅಧ್ಯಕ್ಷ ಪುಷ್ಪರಾಜು, ಮುಖಂಡರಾದ ರೇವನಾಥ್, ಚಂದ್ರು, ಬಿಳೇಕಲ್ಲಹಳ್ಳಿ ಪ್ರಕಾಶ್, ಜಗದೀಶ್ ಕಾರ್ಯಲಯ ಕಾರ್ಯದರ್ಶಿ ದುರ್ಗೇಶ್ ಮತ್ತಿತರರು ಹಾಜರಿದ್ದರು ನಗರ ಎಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ ನಿರೂಪಿಸಿದರು.
Tribute meeting by district BJP