ಬಿಜೆಪಿ ಮಹಿಳಾ ಮೋರ್ಚಾದಿಂದ ನಾರಿಶಕ್ತಿ ವಂದನಾ ಮ್ಯಾರಥಾನ್
ಚಿಕ್ಕಮಗಳೂರು: ನಗರದಲ್ಲಿ ಇಂದು ಬಿಜೆಪಿ ಮಹಿಳಾ ಮೋರ್ಚಾದಿಂದ ನಾರಿಶಕ್ತಿ ವಂದನಾ ಮ್ಯಾರಥಾನ್ ಹಾಗೂ ಯುವ ಮೋರ್ಚಾದಿಂದ ರಾಷ್ಟ್ರ ಮೊದಲು ತಿರಂಗಾ ಯಾತ್ರೆ ಏಕಕಾಲದಲ್ಲಿ ನಡೆಯಿತು.
ದೇಶ, ಮೋದಿಗಾಗಿ ಓಟ ನಾರಿ ಶಕ್ತಿ ವಂದನಾ ಮ್ಯಾರಥಾನ್ನಲ್ಲಿ ಹಲವಾರು ಮಹಿಳೆಯರು ನಗರದ ಹನುಮಂತಪ್ಪ ವೃತ್ತದಿಂದ ನಡಿಗೆ ಪ್ರಾರಂಭಿಸಿದರು. ಅವರನ್ನು ಹಿಂಬಾಲಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಷ್ಟ್ರ ತಿರಂಗಾ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಬಂದರು. ಮತ್ತೊಮ್ಮೆ ಮೋದಿ ಘೋಷಣೆ ಕೂಗಿದರು. ಆಜಾದ್ ಪಾರ್ಕಿನಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಪರವಾದ ಅಲೆ ಇದೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಘೋಷವಾಕ್ಯದಡಿಯಲ್ಲಿ ಎಲ್ಲ ಮಹಿಳೆಯರು ದೇಶ, ಮೋದಿಗಾಗಿ ಇಂದು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಪ್ರಧಾನಿ ಮೋದಿ ದೇಶದ ಚುಕ್ಕಾಣಿ ಹಿಡಿದ ನಂತರ ಮಕ್ಕಳಿಗೆ, ಮಹಿಳೆಯರಿಗೆ ಅನುಕೂಲ ಆಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮೋದಿಗಾಗಿ ಕೆಲಸ ಮಾಡಿ ಮತ್ತೊಮ್ಮೆ ಬಿಜೆಪಿ ಅಕಾರಕ್ಕೆ ತರುವ ನಿಟ್ಟಿನಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಸುನಿತಾ ಜಗದೀಶ್ ಮಾತನಾಡಿ, ೨೦೧೪ ರಿಂದ ೨೦೨೪ ರ ಅವಯಲ್ಲಿ ಪ್ರಧಾನಿ ಮೋದಿ ಅವರು ಹೆಣ್ಣು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ ಹುಟ್ಟಿನಿಂದ ಮರಣದವರೆಗೂ ಯೋಜನೆಗಳಿವೆ. ಜನನಿ ಸುರಕ್ಷಾ, ಮಾತೃವಂದನಾ, ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯ ಸಮೃದ್ಧಿ ಯೋಜನೆ ಹೀಗೆ ಅನೇಕ ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿ ಮಾಡಿರುವ ಕಾರಣ ಇಂದು ನಾರಿ ಶಕ್ತಿ ವಂದನಾ ಘೋಷವಾಕ್ಯದಲ್ಲಿ ಮೋದಿ, ದೇಶಕ್ಕಾಗಿ ಮ್ಯಾರಥಾನ್ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ಜಸಂತಾಅನಿಲ್ಕುಮಾರ್, ಶೃತಿ, ರಾಜೇಶ್ವರಿ, ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ರವೀಂದ್ರಬೆಳವಾಡಿ, ರಾಜಪ್ಪ, ನರೇಂದ್ರ ಯುವ ಮೋರ್ಚಾದ ಶರತ್, ಅರವಿಂದ್, ಸಚಿನ್ ಮತ್ತಿತರರು ಭಾಗವಹಿಸಿದ್ದರು.
Narishakti Vandana Marathon by BJP Mahila Morcha