September 19, 2024

ಗ್ಯಾರಂಟಿ ಸಮಾವೇಶದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ

0
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಟಿ.ರಾಜಶೇಖರ್

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಟಿ.ರಾಜಶೇಖರ್

ಚಿಕ್ಕಮಗಳೂರು:  ನಗರದಲ್ಲಿ ಭಾನುವಾರ ಗ್ಯಾರಂಟಿ ಸಮಾವೇಶದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿ ಮೋಜು ಮಸ್ತಿ ಮಾಡಲಾಗಿದೆ. ಇದಕ್ಕೆ ಸರ್ಕಾರದ ಹಣವನ್ನು ಬಳಸಿಕೊಳ್ಳುತ್ತಿರುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಟಿ.ರಾಜಶೇಖರ್ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ತರುವಲ್ಲಿ ಐದೂ ಜನ ಶಾಸಕರು ವಿಫಲವಾಗಿರುವ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಹರಿಕಾರಾಗಿದ್ದ ಬಿಜೆಪಿಯ ಐದೂ ಜನ ಮಾಜಿ ಶಾಸಕರುಗಳ ವಿರುದ್ಧ ವ್ಯಂಗ್ಯವಾಗಿ ಮಾತನಾಡಿ, ನಿಂಧಿಸಲು ಮಾಡಿದ ಸಮಾವೇಶ ಇದಾಗಿತ್ತು ಎಂದು ದೂರಿದ್ದಾರೆ.

ಚಿಕ್ಕಮಗಳೂರಿನ ಅಭಿವೃದ್ಧಿಗೆ ಸಿ.ಟಿ.ರವಿ ಅವರು ಎಷ್ಟು ಅನುದಾನ ತಂದಿದ್ದಾರೆ ಎನ್ನುವುದು ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ ಅವರು ಅದನ್ನು ವ್ಯಂಗ್ಯ ಮಾಡಿರುವುದು ಮುಖ್ಯಮಂತ್ರಿಯಾಗಿ ಅವರಿಗೆ ಶೋಭೆ ತರುವುದಿಲ್ಲ. ಜೊತೆಗೆ ಜಿಲ್ಲೆಗೆ ಯಾವುದೇ ಅನುದಾನ ತರಲಾಗದಿದ್ದರೂ ಐದೂ ಜನ ಶಾಸಕರು ಈ ಸಮಾವೇಶ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಸಮಾವೇಶಕ್ಕೆ ಹಣಕೊಟ್ಟು ಜನರನ್ನು ಕರೆತರಲಾಗಿದೆ. ಸರ್ಕಾರದ ಹಣವನ್ನು ಇದಕ್ಕೆ ಬಳಸಬಾರದು ಎಂದು ಜಿಲ್ಲಾಧಿಕಾರಿಗಳನ್ನು ಕೇಳಿಕೊಳ್ಳುತ್ತೇವೆ ಎಂದರು.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಜನ ಕರೆ ತರಲು ಬಳಸಿಕೊಂಡಿದ್ದಾರೆ. ಅದನ್ನೂ ಉಚಿತ ಎನ್ನುವಂತೆ ಬಳಸಿದ್ದಾರೆ. ಈ ರೀತಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿ ಕಾಂಗ್ರೆಸ್ ಸಮಾವೇಶ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.

ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒಂದು ಉತ್ತಮ ಪ್ಯಾಕೇಜ್ ಕೊಡಬಹುದು ಎಂದು ಭಾವಿಸಿದ್ದೆವು. ಆದರೆ ಕೇವಲ ಕೇಂದ್ರ ಸಕಾರ, ಸಿ.ಟಿ.ರವಿ ಅವರನ್ನು ದೂಷಿಸುತ್ತಾ ಕಾಲ ಹರಣ ಮಾಡಿ, ಜನರ ಹಾದಿ ತಪ್ಪಿಸಿ, ಗೊಂದಲ ನಿರ್ಮಾಣ ಮಾಡುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ನಗರಸಭೆಗೂ ಯಾವುದೇ ವಿಶೇಷ ಅನುದಾನ ಘೋಷಿಸದೆ ಮುಖ್ಯಮಂತ್ರಿಗಳು ಖಾಲಿ ಕೈನಲ್ಲಿ ಟಾ ಟಾ ಹೇಳಿ ಹೋಗಿರುವುದನ್ನು ನೋಡಿದರೆ. ಲೋಕಸಭೆ ಚುನಾವಣೆಯಲ್ಲಿ ಜನ ನಮ್ಮ ಠೇವಣಿ ತೆಗೆಯುತ್ತಾರೆ ಎನ್ನುವ ಭಯದಲ್ಲಿ ಕೇಂದ್ರದ ಮೇಲೆ ಆಪಾದನೆ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.

ಈಗಲೇ ಕಾಂಗ್ರೆಸ್ ಸರ್ಕಾರ ರಾಜ್ಯವನ್ನ ಸಾಲದ ಕೂಪಕ್ಕೆ ತಳ್ಳಿದೆ ಮುಂದೆ ಇವರ ಯಾವುದೇ ಕುತಂತ್ರಗಳಿಂದ ಜನರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಇವರ ಬ್ರದರ್ಸ್ ಎಲ್ಲರೂ ಸೇರಿ ಬಾಂಬ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಜನರನ್ನು ಭಯದಲ್ಲಿಟ್ಟು ಮತ ಹಾಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲವೂ ನಡೆಯುವುದಿಲ್ಲ ಎಂದರು.

ಬಿಜೆಪಿ ಬಾರಿ ೪೦೦ ಸೀಟುಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ಇವರಿಂದ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

Congress Convention in the name of Guarantee Convention

About Author

Leave a Reply

Your email address will not be published. Required fields are marked *

You may have missed