September 19, 2024

ಶೃಂಗೇರಿ ಮಠಕ್ಕೆ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ

0
ಶೃಂಗೇರಿ ಮಠಕ್ಕೆ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ

ಶೃಂಗೇರಿ ಮಠಕ್ಕೆ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ

ಚಿಕ್ಕಮಗಳೂರು: ಶೃಂಗೇರಿ ಶ್ರೀಮಠಕ್ಕೆ ಮೈಸೂರಿನ ರಾಜವಂಶಸ್ಥರಾದ ಯಧುವೀರ್ ಕೃಷ್ಣ ದತ್ತ ಒಡೆಯರ್ ಭಾನುವಾರ ಭೇಟಿ ನೀಡಿದ್ದಾರೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಯದುವೀರ್ ಕೃಷ್ಣ ದತ್ತ ಒಡೆಯರ್‌ಕಿರಿಯ ಜಗದ್ಗರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಮೈಸೂರು ಜಿಲ್ಲೆಗೆ ಬಿಜೆಪಿ ಅಭ್ಯರ್ಥಿಯಾಗಿ ಇವರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೆ ಟೆಂಪಲ್ ರನ್ ಆರಂಭಗೊಂಡಿದೆ. ಒಡೆಯರ್ ಅವರು ಶೃಂಗೇರಿ ಶ್ರೀಮಠ, ಶ್ರೀಗಳು, ಶಾರದಾಂಬೆ ದರ್ಶನ ಪಡೆದುಕೊಂಡರು.

ಶೃಂಗೇರಿ ಶ್ರೀಮಠಕ್ಕೂ ಮೈಸೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.ಈ ಹಿಂದೆಯೂ ಹಲವು ಕಾರ್ಯಕ್ರಮಗಳಿಗೆ ಶೃಂಗೇರಿಗೆ ಮೈಸೂರು ರಾಜವಂಶಸ್ಥರು ಭೇಟಿನೀಡಿದ್ದರು.

ಮೈಸೂರು ಬಿಜೆಪಿ ಟಿಕೆಟ್‌ಗೆ ಇವರ ಹೆಸರು ಕೇಳಿಬರುತ್ತಿರುವ ನಡುವೆಯೇ ಶೃಂಗೇರಿ ಭೇಟಿ ಕುತೂಹಲ ಮೂಡಿಸಿದೆ.

Yaduvir Krishnadatta Wodeyar visit to Sringeri Math

About Author

Leave a Reply

Your email address will not be published. Required fields are marked *

You may have missed