September 19, 2024

District Swabhimani S.C. And S.T. A union of organizations: ಜನಾಂಗವು ಮಣ್ಣಿನ ಕೊಳೆಯುವುದರ ಬದಲು ಮೊಳಕೆಯೊಡೆಯಲಿ

0

????????????????????????????????????

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಎಸ್ಸಿ, ಎಸ್ಟಿ ಜನಾಂಗವು ಮಣ್ಣಿನಲ್ಲಿ ಕೊಳೆತು ಹೋಗುವ ಬದಲು ಸಮಾಜದಲ್ಲಿ ಮೊಳಕೆಯೊಡೆಯುವ ಮೂಲಕ ರಾಜ್ಯ ಹಾಗೂ ದೇಶದಲ್ಲಿ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಆಳುವ ವರ್ಗದಲ್ಲಿ ಮುನ್ನೆಡೆಯಬೇಕು ಎಂದು ಮೈಸೂರು ಉರಿ ಲಿಂಗಪೆದ್ದ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಸ್ವಾಭಿಮಾನಿ ಎಸ್.ಸಿ. ಮತ್ತು ಎಸ್.ಟಿ. ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ‘ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳು ಏಕೆ ಒಂದಾಗ ಬೇಕು’ ಎಂಬ ಒಂದು ಚರ್ಚೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು.

ನಿರಂತರವಾಗಿ ದೌರ್ಜನ್ಯ, ಶೋಷಣೆಯಿಂದ ಜನಾಂಗವು ಬಳಲುತ್ತಿರುವುದರಿಂದ ಎಲ್ಲಾ ಮುಖಂಡರು ಒಟ್ಟಾಗುವ ಮೂಲಕ ಪ್ರಜಾಪ್ರಭುತ್ವದ ಆಳುವ ವರ್ಗದ ಹಾದಿಯಲ್ಲಿ ನಡೆದರೆ ಮಾತ್ರ ಜನಾಂಗದ ಬೆಳವಣಿಗೆ ಸಹಕಾರಿಯಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಸಮಾಜದಲ್ಲಿ ಮುಂದೆ ಸಾಗಲು ಪ್ರತಿಯೊಬ್ಬರು ಶ್ರಮವಹಿಸಬೇಕು ಎಂದು ತಿಳಿಸಿದರು.

ಎಸ್ಸಿ, ಎಸ್ಸಿ ಜನಾಂಗದವರು ತಮ್ಮ ಜೀವನದಲ್ಲಿ ಬಲಾಡ್ಯರೊಂದಿಗೆ ಪ್ರಶ್ನೆ ಮಾಡುವುದನ್ನು ಕಲಿಯದಿದ್ದರೆ ಜೀವಂತವಾಗಿ ಸಮಾಧಿಯಾದಂತೆ. ಆದ್ದರಿಂದ ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪಕ್ಷದಲ್ಲಿ ಕೋಳಿ ಫಾರಂಗಳಲ್ಲಿ ಸಾಯುವ ರೀತಿಯಲ್ಲೇ, ಸ್ಲಂಗಳಲ್ಲಿ ಸಮುದಾಯದವರು ಸಾಯಬೇಕಾಗುತ್ತದೆ ಎಂದು ಹೇಳಿದರು.

ಜನಾಂಗದಲ್ಲಿ ಕೆಲವು ಮಂದಿ ಹರಿದ ಬಟ್ಟೆಗಳನ್ನು ಧರಿಸಿರುವುದು ದುಃಖವಾಗುತ್ತಿಲ್ಲ. ಸಂಘಟನೆಗಳು ಹರಿದು ಹೋಗುತ್ತಿರುವುದು ತೀವ್ರ ದುಃಖತಂದಿದೆ. ಆ ನಿಟ್ಟಿನಲ್ಲಿ ಸಂಘಟನೆಗಳು ಎಲ್ಲವು ಒಟ್ಟಾಗಿ ಸಮುದಾಯದ ಬೆಳವಣಿಗೆ ಪೂರಕವಾಗಿ ಒಂದಾಗಿದ್ದಲ್ಲಿ ಮಾತ್ರ ಸಮಾಜದ ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಎಸ್ಸಿ ಹಾಗೂ ಎಸ್ಟಿ ಸಮುದಾಯದವು ಪ್ರಸ್ತುತ ದಿನದಲ್ಲಿ ರಾಜಕೀಯ ಪ್ರಜ್ಞೆ ಹೊಂದಿರದಿದ್ದಲ್ಲಿ ಆಳುವ ವರ್ಗವು ಜನಾಂಗದವರಲ್ಲಿ ಆಸೆ, ಆಮಿಷಗಳ ಬೇಡಿಯನ್ನು ಮೆದುಳಿಗೆ ತುಂಬುತ್ತಾರೆ. ಇದರಿಂದ ಹೊರಬರಲು ಕೇವಲ ಅಂಬೇಡ್ಕರ್ ಅವರು ತೋರಿದ ಚಿಂತನೆಯನ್ನು ಮೆದುಳಿಗೆ ಅಳವಡಿಸಿಕೊಂಡಾಗ ಮಾತ್ರ ಬೆಳವಣಿಗೆಯತ್ತ ಮುನ್ನಡೆಯಲು ನೆರವಾಗಲಿದೆ ಎಂದು ತಿಳಿಸಿದರು.

ಸಮುದಾಯದಲ್ಲಿ ಮೌಡ್ಯ ಹಾಗೂ ಕುಡಿತದ ಎರಡು ಶೃತ್ರುಗಳಿವೆ ಅವುಗಳಿಂದ ಹೊರಬರಬೇಕು. ಗುಡಿ, ಗೋಪುರದಿಂದ ಮನುಷ್ಯನ ಜೀವನ ಎಂದಿಗೂ ಬದಲಾಗದು. ಆದರೆ ಅಂಬೇಡ್ಕರ್ ನೀಡಿರುವ ಸಂವಿಧಾನಗಳಿಂದ ಮಾತ್ರ ವೈಯಕ್ತಿಕ ಹಾಗೂ ರಾಜಕೀಯವಾಗಿ ಬದಲಾಗಬಹುದು. ಇದನ್ನು ಮನ ಗಂಡು ಮುಂದಿನ ಚುನಾವಣೆಯಲ್ಲಿ ಅಡಿಯಾಳಾಗುವ ಬದಲು ಜನಾಂಗದ ನಾಯಕನನ್ನು ಗುರುತಿಸಿ ಆಳುವ ವರ್ಗಕ್ಕೆ ಸೇರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿತ್ರದುರ್ಗಾದ ಬೋವಿ ಸಮಾಜದ ಸಿದ್ದರಾಮೇಶ್ವರ ಸ್ವಾಮೀಜಿ ಮಾನವನಿಗೆ ದೈವದಿಂದ ಕೈಹಿಡಿಯಲು ಸಾಧ್ಯವಾಗದಿರಬಹುದು. ಆದರೆ ಅಂಬೇಡ್ಕರ್ ಸಂವಿಧಾನ ಖಂಡಿತ ಕೈಹಿಡಿಯಲಿದ್ದು ಆಧುನಿಕ ಶಿಲ್ಪಿ ವಾಲ್ಮೀಕಿಯವರ ಮಾರ್ಗದರ್ಶನ ದಂತೆ ಜನಾಂಗವು ಸಾಗಬೇಕಿದೆ ಎಂದರು.

????????????????????????????????????

ಅಂಬೇಡ್ಕರ್ ಅವರಿಗೆ ಅಂದಿನ ಸಮಯದಲ್ಲಿ ಸ್ವಾತಂತ್ರ್ಯ ದೊರಕಿರುವುದು ವೈಯಕ್ತಿಕವಾಗಿ ಖುಷಿ ತಂದಿರುವುದಿಲ್ಲ. ಕೇವಲ ಬ್ರಿಟಿಷರಿಂದ ಹಸ್ತಾಂತರವಾಗಿದಷ್ಟೇ ಎಂದ ಅವರು ಇವೆಲ್ಲವುಗಳನ್ನು ಅರಿತು ಅಂಬೇಡ್ಕರ್ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಶೈಕ್ಷಣಿಕ, ರಾಜಕೀಯವಾಗಿ ಎಲ್ಲಾ ರಂಗಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ದೊರೆಯುವ ದಿನವೇ ದೇಶ ಸ್ವಾತಂತ್ರ್ಯವಾದಂತೆ ಎಂದು ಸಾರಿದ ದವರು ಎಂದು ತಿಳಿಸಿದರು.

ರಿಪಬ್ಲೀಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವೆಂಕಸ್ವಾಮಿ ಮಾತನಾಡಿ ದೇಶಕ್ಕೆ ಸಂವಿಧಾನ ಕಲ್ಪಿಸಿದ ಅಂಬೇಡ್ಕರ್ ಅವರು ಡಿ.೬ ರಂದು ಮೃತರಾಗಿ ೬೬ ಕಳೆದಿದ್ದು ಅಂದಿನ ದಿನವನ್ನು ಜನಾಂಗದವರು ಸ್ಮರಿಸುವ ದಿನವನ್ನಾಗಿ ಮಾಡಬೇಕು. ಕೆಲವು ಕಿಡಿಕೇಡಿಗಳು ಯಾವುದೇ ಕುತಂತ್ರ ನಡೆಸಿದರೂ ಸಹ ಸ್ಮರಿಸುವ ಕಾರ್ಯದಲ್ಲಿ ನಿರಂತರರಾಗಿರಬೇಕು ಎಂದ ಅವರು ಸರ್ಕಾರವು ಸಹ ಅಂಬೇಡ್ಕರ್ ಅವರ ಋಣ ತೀರಿಸಲು ಸ್ಮರಣದಿನ ಆಚರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಿಎಸ್‌ಪಿ ರಾಜ್ಯ ಮುಖಂಡ ಗೋಪಿನಾಥ್ ಮಾತನಾಡಿ ದೇಶದಲ್ಲಿ ಗಾಳಿ, ನೀರು ಎಲ್ಲೆಲ್ಲಿ ಇದೆಯೋ ಅದೇ ರೀತಿ ದಲಿತರಿಲ್ಲದ ಊರುಗಳಿಲ್ಲ. ಮುಂಬರುವ ದಿನಗಳಲ್ಲಿ ಎಸ್ಸಿ, ಎಸ್ಟಿ ಸೇರಿದಂತೆ ಅನೇಕ ಪಂಗಡ ಗಳು ಒಟ್ಟಾಗಿ ರಾಜ್ಯದಲ್ಲಿ ಜನಾಂಗದವರಿಲ್ಲದೇ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂಬಂತೆ ಸದೃಡತೆ ಮೂಡಿಸಿದಾಗ ಮಾತ್ರ ಆಳುವ ವರ್ಗಕ್ಕೆ ಸೇರ್ಪಡೆಯಾಗಲು ಸಾದ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಜಾತಿ, ಪ.ಪಂಗಡ ವರ್ಗಗಳ ಆಶಾಕಿರಣ ಸ್ವಾಮೀಗಳಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀ ಬಸವನಾಗದೇವ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಶ್ರೀ ಮಾದರಚೆನ್ನಯ್ಯ ಸ್ವಾಮೀಜಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ದಸಂಸ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಮರ್ಲೆ ಅಣ್ಣಯ್ಯ, ಎಸ್ಟಿ ಸಮಾಜದ ಜಿಲ್ಲಾಧ್ಯಕ್ಷ ಭೀಮಪ್ಪ, ಮುಖಂಡರಾದ ಜಗದೀಶ್ ಕೋಟೆ, ಹುಣಸೇಮಕ್ಕಿ ಲಕ್ಷ್ಮಣ್, ದಂಟರಮಕ್ಕಿ ಶ್ರೀನಿವಾಸ್, ಬಿಳೇಕಲ್ಲು ಬಾಲಕೃಷ್ಣ, ಚಂದ್ರಶೇಖರ್, ಯಲಗುಡಿಗೆ ಹೊನ್ನಪ್ಪ ಮತ್ತಿತರರು ಉಪಸ್ಥಿತ ರಿದ್ದರು.

District Swabhimani S.C. And S.T. A union of organizations

About Author

Leave a Reply

Your email address will not be published. Required fields are marked *

You may have missed