ಅಪಘಾತ ವೇಳೆಯಲ್ಲಿ ಪ್ರಥಮ ಚಿಕಿತ್ಸೆ ಬಹುಮುಖ್ಯ
ಚಿಕ್ಕಮಗಳೂರು: ಅಪಘಾತ ಅಥವಾ ತುರ್ತು ಸಂದರ್ಭದಲ್ಲಿರುವ ವ್ಯಕ್ತಿಗಳಿಗೆ ಮೊದ ಲಿಗೆ ಪ್ರಥಮ ಚಿಕಿತ್ಸೆಯನ್ನು ಒದಗಿಸುವ ಮೂಲಕ ಪ್ರಾಣಾಪಾಯದಿಂದ ಕಾಪಾಡಲು ಮುಂದಾಗಬೇಕು ಎಂದು ರೆಡ್ಕ್ರಾಸ್ ಸಂಸ್ಥೆ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕೆ.ಸುಂದರಗೌಡ ಹೇಳಿದರು.
ನಗರ ಹೊರವಲಯದ ಜಿಲ್ಲಾ ಕಾರಾಗೃಹದಲ್ಲಿ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯ ಕ್ರಮವನ್ನು ಪ್ರತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಅವರು ಮಾಹಿತಿ ನೀಡಿದರು.
ಆಕಸ್ಮಿಕವಾಗಿ ಸಂಭವಿಸುವ ಅಪಘಾತಕ್ಕೆ ವ್ಯಕ್ತಿಗಳು ಒಳಗೊಂಡಲ್ಲಿ ಪ್ರಥಮವಾಗಿ ರಕ್ತ ಹೆಚ್ಚು ಸೋ ರಿಕೆ ಜಾಗದಲ್ಲಿ ಬಟ್ಟೆ ಅಥವಾ ಇನ್ನಿತರೆ ವಸ್ತ್ರಗಳಿಂದ ಬಿಗಿಯಾಗಿ ಕಟ್ಟುವ ಮೂಲಕ ಸೋರಿಕೆ ಕಡಿಮೆಗೊಳಿ ಸಬೇಕು.ತದನಂತರ ಆಸ್ಪತ್ರೆಗೆ ಕರೆದೊಯ್ದುರೆ ವ್ಯಕ್ತಿಯ ಪ್ರಾಣವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ಓರ್ವ ವ್ಯಕ್ತಿ ಆಹಾರ, ನೀರಿಲ್ಲದೇ ಹಲವಾರು ದಿನಗಳು ಬದುಕಬಲ್ಲ. ಅಪಘಾತ ವೇಳೆಯಲ್ಲಿ ಹೆಚ್ಚು ರಕ್ತ ಸೋರಿಕೆಗೊಂಡಲ್ಲಿ ಪ್ರಾಣ ಉಳಿಸಲು ಅಸಾಧ್ಯ. ಮಾನವ ಶರೀರದಲ್ಲಿ ಕೇವಲ ೫ ಲೀಟರ್ನಷ್ಟು ಮಾತ್ರ ರಕ್ತವನ್ನು ಹೊಂದಿದ್ದು ಅಪಘಾತದ ವೇಳೆಯಲ್ಲಿ ರಕ್ತದ ಮಹತ್ವವನ್ನು ತಿಳಿದುಕೊಳ್ಳುವುದು ಬಹುಮುಖ್ಯ ಎಂದರು.
ಪ್ರಪಂಚದಲ್ಲಿ ಸರಿಸುಮಾರು ೧೬ ಸಾವಿರಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಸಾವನ್ನಪ್ಪುವ ವರದಿ ಗಳಿವೆ, ಈ ಪೈಕಿ ಶೇ.೩೦ ಮಂದಿ ಪ್ರಥಮ ಚಿಕಿತ್ಸೆ ದೊರೆಯದೇ ಸಾವಪ್ಪುತ್ತಿರುವುದು ದುರ್ದೈವ. ಹೀಗಾಗಿ ಜನತೆಗೆ ಅತಿಹೆಚ್ಚು ಪ್ರಾಮುಖ್ಯತೆಯನ್ನು ಪ್ರಥಮ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಅಪಘಾತ ಅಥವಾ ಹೃದಯಘಾತಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡುವುದೇ ಅರಿವಿರುವುದಿಲ್ಲ, ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ರಕ್ಷಿಸುವ ಸಂಖ್ಯೆ ವಿರಳವಾಗಿದೆ. ಈ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸುವುದು ಸೂಕ್ತ. ಹಾಗಾಗಿ ವಿದ್ಯಾವಂತರು ಚಿಕಿತ್ಸೆ ಬಗ್ಗೆ ಪ್ರಚಾರ ಪಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ರೆಡ್ಕ್ರಾಸ್ ಅಧ್ಯಕ್ಷ ಪ್ರದೀಪ್ಗೌಡ ಮಾತನಾಡಿ ಯುದ್ಧಭೂಮಿ ನಡೆದ ಸಾವಿರಾರು ಸೈನಿಕರ ಸಾವು-ನೋವುಗಳನ್ನು ಮನಗಂಡು ಹೆನ್ಸಿ ಡೋನೋಟ್ ಎಂಬುವವರು ಪ್ರಥಮ ಚಿಕಿತ್ಸೆಯನ್ನು ಪ್ರಯೋಗಿ ಸಿ ಪ್ರಾಣರಕ್ಷಣೆಗೆ ಮುಂದಾಗಿದ್ದರು. ಅಂದಿನಿಂದ ವಿಶ್ವಾದ್ಯಂತ ಪ್ರಥಮ ಚಿಕಿತ್ಸಾ ಎಂಬುದು ಪ್ರಚಲಿತಕ್ಕೆ ಬಂ ದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ರಸೂಲ್ಖಾನ್, ನಿರ್ದೇಶಕರಾದ ವಿಲಿಯಂ ಪೆರೇರಾ, ವಿನಾಯಕ, ಕಾರಾಗೃಹ ಅಧೀಕ್ಷಕ ಐ.ಜಿ.ಕುಕನೂರು, ಸಹಾಯಕ ಜೈಲರ್ಗಳಾದ ದಯಾನಂದ್ ಬೊಂಗಾಳೆ, ಲಕ್ಕೇಗೌಡ, ಶಿಕ್ಷಕ ರಾಜಕುಮಾರ್, ಆಶಾ ಮತ್ತಿತರರು ಉಪಸ್ಥಿತರಿದ್ದರು.
Demonstration of first aid training procedures