ಜೂ.೨೬ಕ್ಕೆ ಕ್ರಿಸ್ಟಲಿಸ್ ಹೋಟೆಲ್ನಲ್ಲಿ ಕರೋಕೆ ಹಾಡಿನ ಮೂಲಕ ಊಟ
ಚಿಕ್ಕಮಗಳೂರು: ಸಂಗೀತ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕ್ರಿಸ್ಟಲಿನ್ ಸ್ವಾದಿಷ್ಠ ರೆಸ್ಟೋರೆಂಟ್ ಜನತೆಗೆ ಹೊಸದಾಗಿ ಕರೋಕೆ ಹಾಡಿನ ಮೂಲಕ ಊಟ ಸವಿಯುವ ಅವಕಾಶವನ್ನು ಕಲ್ಪಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಕ್ರಿಸ್ಟಲಿನ್ ರೆಸ್ಟೋರೆಂಟ್ ಮಾಲೀಕ ಜಿತೇಂದ್ರಕುಮಾರ್, ಇದೇ ಜೂನ್ ೨೬ ರಂದು ಸಂಜೆ ೭ ಗಂಟೆಯಿಂದ ರಾತ್ರಿ ೧೦ ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೇವಲ ೩೩೩ ರೂ ಒಬ್ಬರಿಗೆ ಅನ್ಲಿಮಿಟೆಡ್ ಭಫೆಟ್ ಊಟವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಹೊಸ ಪ್ರತಿಭೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕ್ರಿಸ್ಟಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ೧೦೦ ಜನರಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ಕಲೆ ಇರುತ್ತದೆ, ಕಾರಣಾಂತರಗಳಿಂದ ಅವು ಹೊರಬರಲು ಸಾಧ್ಯವಾಗಿರುವುದಿಲ್ಲ ಆದ್ದರಿಂದ ಯುವಕ-ಯುವತಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಹಾಡುವ ಅವಕಾಶ ಎಲ್ಲರಿಗೂ ಸಿಗಬೇಕೆಂಬ ಉದ್ದೇಶದಿಂದ ಈ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಎಲೆಮರೆ ಕಾಯಿಯಂತಿರುವ ಪ್ರತಿಭೆ ಹೊರಬರಲು ಇದು ಸದಾವಕಾಶವಾಗಿದ್ದು ಜೊತೆಗೆ ಕುಟುಂಬ ಹಾಗೂ ಸ್ನೇಹಿತರ ಜೊತೆ ಹಾಡುತ್ತಾ ಊಟ ಮಾಡುವ ಹೊಸ ಬಗೆಯ ವಿನೂತನ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಸಂಗೀತಾಸಕ್ತರು ಮೊಬೈಲ್ ಸಂಖ್ಯೆ ೯೪೪೮೨೭೦೫೦೭ ಜಿತೇಂದ್ರಕುಮಾರ್ ಎನ್.ಎಸ್ ಮತ್ತು ೬೩೬೩೨೩೭೨೭೩ ಪ್ರಸನ್ನಕುಮಾರ್ ಎನ್.ಎಸ್ ಇವರಿಗೆ ಕರೆ ಮಾಡಲು ವಿನಂತಿಸಿದರು.
ತುಂಬಾ ಚೆನ್ನಾಗಿ ಹಾಡುವ ಓರ್ವ ಪುರು?, ಮಹಿಳೆ, ಮಕ್ಕಳಿಗೆ ಬಹುಮಾನ ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಗಾಯಕ ರಾಯನಾಯ್ಕ, ದರ್ಶನ್, ಆನಂದ್, ತೇಜಮೂರ್ತಿ ಇದ್ದರು.
Jun 26 Dinner with Karaoke at Crystalis Hotel